ಅಮರಾವತಿ: ಆಂಧ್ರಪ್ರದೇಶವನ್ನು ತನ್ನ ‘ಕಾರ್ಯತಂತ್ರ ನೆಲೆ’ಯನ್ನಾಗಿಸುವ ನಿಟ್ಟಿನಲ್ಲಿ ಭಾರತೀಯ ವಾಯುಸೇನೆ ಕಾರ್ಯಪ್ರವೃತ್ತವಾಗಿದೆ. ಇಲ್ಲಿನ ಪ್ರಕಾಶಮ್ ಜಿಲ್ಲೆಯ ದೊನಕೊಂಡದಲ್ಲಿ ವಾಯುಸೇನೆಯು ತನ್ನ ಪ್ರಮುಖ ಹೆಲಿಕಾಫ್ಟರ್ ತರಬೇತಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದೆ.
ಇಷ್ಟೇ ಅಲ್ಲದೇ, ಅನಂತಪುರ ಜಿಲ್ಲೆಯಲ್ಲಿ ಡ್ರೋನ್ ಉತ್ಪಾದನಾ ಘಟಕ, ಅಮರಾವತಿಯಲ್ಲಿ ಸೈಬರ್ ಸೆಕ್ಯೂರಿಟಿ ಸೆಂಟರ್ ಸ್ಥಾಪನೆ ಮಾಡುವ ಪ್ರಸ್ತಾಪವನ್ನೂ ಐಎಎಫ್ ಆಂಧ್ರ ಸರ್ಕಾರದ ಮುಂದಿಟ್ಟಿದೆ. ರಾಜಹಮುಂಡ್ರಿ ಮತ್ತು ವಿಜಯವಾಡವನ್ನು ಏರ್ಪೋರ್ಟ ಅಸೆಟ್ ಪೊಝಿಶನಿಂಗ್ ಬೇಸ್ ಆಗಿಸಲು ಯೋಜಿಸಲಾಗಿದೆ.
ಪೂರ್ವ ಕರಾವಳಿಯಲ್ಲಿ ತನ್ನ ಕಣ್ಗಾವಲನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ರಾಜಹಮುಂಡ್ರಿ ಮತ್ತು ವಿಜಯವಾಡದಲ್ಲಿನ ನಾಗರಿಕ ವಿಮಾನನಿಲ್ದಾಣವನ್ನು ತನ್ನ ಯುದ್ಧವಿಮಾನ, ಇತರ ಏರ್ಕ್ರಾಫ್ಟ್ಗಳ ನಿಲುಗಡೆಗೆ ಬಳಸಲು ವಾಯುಸೇನೆ ಬಯಸಿದೆ.
ಈ ಕಾರ್ಯಗಳಿಗಾಗಿ ವಾಯುಸೇನೆಯೊಂದಿಗೆ ಹೊಂದಾಣಿಕೆ ಸಾಧಿಸಲು ಆಂಧ್ರ ಸರ್ಕಾರ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಸೂಕ್ತ ಸ್ಥಳದ ಗುರುತಿಸುವಿಕೆಗಾಗಿ ಗ್ರೌಂಡ್ ಸರ್ವೇಗಳನ್ನೂ ನಡೆಸಲಾಗಿದೆ ಮತ್ತು ಈ ಎಲ್ಲಾ ಯೋಜನೆಗಳ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ವಾಯುಸೇನೆಗೆ ಸೂಚನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.