ನವದೆಹಲಿ: ಸೋಮವಾರ 68ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ, ಅವರ ಪರಮಾಪ್ತ ಸ್ನೇಹಿತ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಬ್ಲಾಗ್ನಲ್ಲಿ ಭಾವುಕ ನುಡಿಗಳನ್ನು ಬರೆದಿದ್ದಾರೆ.
ದೇಶದ ಅಭಿವೃದ್ಧಿಗೆ ಮೋದಿ ನೀಡಿದ ಕೊಡುಗೆಗಳನ್ನು ಬಣ್ಣಿಸಿರುವ ಅವರು, ಈ ಹಿಂದೆ ಅಸ್ತಿತ್ವದಲ್ಲೇ ಇರದ ಭಾಗಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಮೋದಿಯೇ ಕಾರಣ ಎಂದಿದ್ದಾರೆ.
ಎಳೆಮರೆ ಕಾಯಿಯಂತಿದ್ದ ಸಮಾಜದ ಹಲವು ವರ್ಗದ ಹೀರೋಗಳನ್ನು ಮೋದಿ ಮೊಬೈಲ್ ಆಪ್ ಮೂಲಕ ಸಂಪರ್ಕಿಸಿ, ಅವರು ಮಾಡುತ್ತಿರುವ ಕಾರ್ಯ ಎಷ್ಟು ಮೌಲ್ಯಯುತವಾದುದು, ಅವರು ದೇಶ ನಿರ್ಮಾಣಕ್ಕೆ ಎಂತಹ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿದ್ದಾರೆ. ನನಗೆ ಮೊದಲಿನಿಂದಲೂ ಗೊತ್ತಿರುವಂತೆ ಇದು ಮೋದಿಯ ಅಪ್ಪಟ ಗುಣ. ಎಲ್ಲರನ್ನೂ ಅವರು ವೈಯಕ್ತಿವಾಗಿ ಪ್ರೇರೇಪಿಸುತ್ತಾರೆ, ಅವರೆಷ್ಟು ವಿಶೇಷ ಎಂಬುದನ್ನು ಮನದಟ್ಟು ಮಾಡಿಸುತ್ತಾರೆ. ಬೇರೆಯವರ ಸೇವೆಯನ್ನು ಗುರುತಿಸಿ, ಪುರಸ್ಕರಿಸುವುದು ಮಹಾನ್ ಕಾರ್ಯ ಎಂದಿದ್ದಾರೆ.
ಬೇರೆಯವರನ್ನು ಪ್ರೇರೇಪಿಸುವ ಮೂಲಕ ಅವರು ತಮ್ಮ ಸೇವಾ ಸ್ಫೂರ್ತಿಯನ್ನು ಪ್ರದರ್ಶಿಸುತ್ತಾರೆ. ಪ್ರತಿಕ್ಷಣವೂ ಭಾರತವನ್ನು ಅತ್ಯುತ್ತಮವಾಗಿಸುವ ಕಾಯಕದಲ್ಲಿ ಅವರು ನಿರತರಾಗಿರುತ್ತಾರೆ ಎಂದಿದ್ದಾರೆ.
ಮೋದಿಗೆ ಕಾನೂನು ಸುವ್ಯವಸ್ಥೆಯ ಮೇಲೆ ನಂಬಿಕೆಯಿದೆ, ಪ್ರತಿಯೊಬ್ಬರೂ ಕಾನೂನಿನನ್ವಯ ನಿರ್ಭೀತಿಯಿಂದ ಕಾರ್ಯ ಮಾಡಬೇಕು ಎಂಬುದು ಅವರ ಆಶಯವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.