ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಾದ್ಯಂತ ಬಿಎಸ್ಎಫ್ ‘ಸ್ಮಾರ್ಟ್ ಬೇಲಿ’ ಅಳವಡಿಸಲು ನಿರ್ಧರಿಸಿದ್ದು, ಈ ಯೋಜನೆಗೆ ಪ್ರಾಯೋಗಿಕವಾಗಿ ಸೋಮವಾರ ಚಾಲನೆ ದೊರೆಯಲಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದು, ಈ ವೇಳೆ ‘ಸ್ಮಾರ್ಟ್ ಬೇಲಿ’ ಯೋಜನೆಗೆ ಚಾಲನೆ ದೊರಕಲಿದೆ. ಬಿಎಸ್ಎಫ್ ಈ ಯೋಜನೆಯನ್ನು ‘ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆ’ಯ ಭಾಗವಾಗಿ ಅನುಷ್ಠಾನಕ್ಕೆ ತರುತ್ತಿದೆ.
ಪಾಕಿಸ್ಥಾನದೊಂದಿಗಿನ ಭಾರತದ ಗಡಿಯನ್ನು ಸುಭದ್ರಗೊಳಿಸುವ ಸಲುವಾಗಿ ‘ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆ’ಯನ್ನು ಜಾರಿಗೆ ತರಲಾಗಿದೆ
ಮೂಲಗಳ ಪ್ರಕಾರ, ಪಲೌರಾದಲ್ಲಿನ ಬಿಎಸ್ಎಫ್ ಹೆಡ್ ಕ್ವಾರ್ಟರ್ನಲ್ಲಿ ಈ ಯೋಜನೆಗೆ ರಾಜನಾಥ ಸಿಂಗ್ ಚಾಲನೆಯನ್ನು ನೀಡಲಿದ್ದಾರೆ.
ಈಗಾಗಲೇ ಅಸ್ಸಾಂನ ಬಾಂಗ್ಲಾದೊಂದಿಗಿನ ಗಡಿಯಲ್ಲಿ ಈ ‘ಸ್ಮಾರ್ಟ್ ಬೇಲಿ’ಯನ್ನು ಬಿಎಸ್ಎಫ್ ಅನುಷ್ಠಾನಗೊಳಿಸಿದೆ. ಈ ಬೇಲಿಯಲ್ಲಿ ಅಟೊಮೋಟೆಡ್ ಸರ್ವಿಲೆನ್ಸ್ ಟೆಕ್ನಾಲಜಿ, ಅಲರಾಂ ಡೆಟೆಕ್ಷನ್ ಸಿಸ್ಟಮ್ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.