ದಂತೇವಾಡ: ತನ್ನ ಅಜ್ಜಿಯ ಕನಸನ್ನು ಈಡೇರಿಸುವ ಸಲುವಾಗಿ ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ವ್ಯಕ್ತಿಯೊಬ್ಬರು 50 ಮೀಟರ್ ಉದ್ದದ ಜಲಾಶಯವನ್ನು ನಿರ್ಮಿಸಿ, ರೈತರಿಗೆ, ಜೀವ ಸಂಕುಲಗಳಿಗೆ ನೀರಿನ ಆಶ್ರಯ ನೀಡಿದ್ದಾರೆ.
ಗದಪಲ ಗ್ರಾಮದ ಲಿಂಗರಾಮ್ ಮಾಡೊವಿ ಎಂಬುವವರು 10 ವರ್ಷಗಳ ಕಾಲ ನಿರಂತರವಾಗಿ ಶ್ರಮಪಟ್ಟು ಈ ಜಲಾಶಯವನ್ನು ನಿರ್ಮಾಣ ಮಾಡಿದ್ದಾರೆ. ದುವಾಲಿ ಕರ್ಕಾ ನದಿಯಿಂದ 300-400 ಮೀಟರ್ ಉದ್ದದ ತೋಡನ್ನು ತೋಡಿ ಜಲಾಶಯಕ್ಕೆ ನೀರು ಬರುವಂತೆ ಮಾಡಿದ್ದಾರೆ.
ಇವರ ಅಜ್ಜಿಗೆ ಜಲಾಶಾಯ ನಿರ್ಮಾಣವಾಗಬೇಕೆಂಬ ಆಶಯವಿತ್ತು, ಆದರೆ ಅಧಿಕಾರಿಗಳು ಇದಕ್ಕೆ ಮುಂದೆ ಬಂದಿರಲಿಲ್ಲ, ಇದರಿಂದ ಬೇಸತ್ತ ಲಿಂಗರಾಮ್ ತಾವೇ ಸ್ವತಃ ಮುಂದೆ ಬಂದು ಆಕೆಯ ಕನಸನ್ನು ಈಡೇರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.