ನವದೆಹಲಿ: ದೇಶ ಕಂಡ ಮಹಾನ್ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರ 157ನೇ ಜನ್ಮ ದಿನವನ್ನು ಇಂದು ‘ಎಂಜಿನಿಯರ್ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಶೇಷ ಡೂಡಲ್ ಮೂಲಕ ಗೂಗಲ್ ಅವರಿಗೆ ಗೌರವವನ್ನು ಸೂಚಿಸಿದೆ.
ವಿಶ್ವದ ಅತೀ ಶ್ರೇಷ್ಠ ಎಂಜಿನಿಯರ್ಗಳ ಪಟ್ಟಿಯಲ್ಲಿ ವಿಶ್ವೇಶ್ವರಯ್ಯ ಅವರ ಹೆಸರೂ ಇದ್ದು, ದೇಶದಲ್ಲಿ ಅತ್ಯಂತ ಅದ್ಭುತ ಎನಿಸುವ ನಿರ್ಮಾಣಗಳನ್ನು ಇವರು ಮಾಡಿದ್ದಾರೆ.
ಭಾರತದ ಎಂಜಿನಿಯರಿಂಗ್ ಪಿತಾಮಹ ಎಂದು ಇವರನ್ನು ಪರಿಗಣಿಸಲಾಗಿದ್ದು, ಮಂಡ್ಯ ಜಿಲ್ಲೆಯ ‘ಕೃಷ್ಣ ರಾಜ ಸಾಗರ ಡ್ಯಾಂ’ ಇವರ ಶ್ರೇಷ್ಠ ನಿರ್ಮಾಣಗಳಲ್ಲಿ ಒಂದು. ಹೈದರಾಬಾದ್ ನಗರದ ನೆರೆ ಸುರಕ್ಷತಾ ವ್ಯವಸ್ಥೆ ಕೂಡ ಇವರ ಬ್ರೈನ್ ಚೈಲ್ಡ್ ಆಗಿದೆ.
1955ರಲ್ಲಿ ಇವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ದಿಂದ ಪುರಷ್ಕರಿಸಲ್ಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.