ಜೈಪುರ: ಗೊಬ್ಬರವಾಗಿ, ಅಡುಗೆ ಅನಿಲವಾಗಿ, ದೀಪ ಬೆಳಗಿಸಲು ಹೀಗೆ ನಾನಾ ಕಾರಣಗಳಿಗೆ ಗೋವಿನ ಸಗಣಿಯನ್ನು ಬಳಕೆ ಮಾಡಲಾಗುತ್ತದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಸೆಗಣಿಯಿಂದ ಕಾಗದವನ್ನೂ ತಯಾರು ಮಾಡಲಾಗುತ್ತಿದೆ.
ರಾಜಸ್ಥಾನ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಈಗಾಗಲೇ ಸಗಣಿಗಳಿಂದ ಪೇಪರ್ ತಯಾರಿಕೆ ಆರಂಭಿಸಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಇದಕ್ಕೆ ಗುರುವಾರ ಚಾಲನೆಯನ್ನು ನೀಡಿದ್ದಾರೆ. ಕಮರಪ್ಪ ನ್ಯಾಷನಲ್ ಹ್ಯಾಂಡ್ಮೇಡ್ ಪೇಪರ್ ಇನ್ಸ್ಟಿಟ್ಯೂಟ್ ಈ ಕಾಗದಗಳನ್ನು ತಯಾರಿಸುತ್ತಿದೆ.
ಚಿಂದಿ ಬಟ್ಟೆಯಿಂದ ತಯಾರಿಸಿದ ಕಾಗದ (Rag paper) ಮತ್ತು ಸಗಣಿಯನ್ನು ಬಳಸಿ ಈ ಕಾಗದಗಳನ್ನು ತಯಾರು ಮಾಡಲಾಗುತ್ತಿದೆ. ಇದರಿಂದಾಗಿ ಗೋವು ಸಾಕಾಣಿಕೆದಾರರ ಆದಾಯವೂ ಹೆಚ್ಚಳವಾಗುವ ನಿರೀಕ್ಷೆ ಇದೆ. ರಸ್ತೆ, ಬೀದಿಗಳು ಸಗಣಿ ಮುಕ್ತವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.