ನವದೆಹಲಿ: ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಅನಗತ್ಯವಾಗಿ ಬಂಧನಕ್ಕೀಡಾಗಿದ್ದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ರೂ.50 ಲಕ್ಷಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.
1994ರಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ನ ತಂತ್ರಜ್ಞಾನಗಳನ್ನು ಇತರ ರಾಷ್ಟ್ರಗಳಿಗೆ ಲೀಕ್ ಮಾಡಿದ ಆರೋಪದ ಮೇರೆಗೆ, ಇಸ್ರೋ ಕ್ರಿಯೋಜೆನಿಕ್ ಡಿವಿಜನ್ನ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್ ಅವರ ಬಂಧನವಾಗಿತ್ತು. ಬಂಧನದ ವೇಳೆ ಇವರ ಮೇಲೆ ಹಲ್ಲೆಗಳೂ ನಡೆದಿತ್ತು. ಕೇರಳದ ಯುಡಿಎಫ್ ಸರ್ಕಾರದ ಕುಮ್ಮಕ್ಕು ಇದಕ್ಕಿತ್ತು. ಅಧಿಕೃತ ಗುಪ್ತ ಮಾಹಿತಿ ಕಾಯ್ದೆಯಡಿ ಇವರ ಬಂಧನವಾಗಿತ್ತು. ಆದರೆ 1998ರಲ್ಲಿ ಎಲ್ಲಾ ಆರೋಪಗಳಿಂದ ಇವರು ಮುಕ್ತರಾಗಿದ್ದರು.
ತಮಗಾದ ಅನ್ಯಾಯದ ವಿರುದ್ಧ ಇವರು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು. ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿದ್ದ ಆಯೋಗ, ಅವರಿಗೆ ಕೇರಳ ಸರ್ಕಾರದಿಂದ ರೂ.10ಲಕ್ಷ ಪರಿಹಾರ ದೊರೆಕಿಸಿಕೊಟ್ಟಿತ್ತು. ಬಳಿಕ ತಮ್ಮನ್ನು ಅನಗತ್ಯವಾಗಿ ಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವಂತೆ ಕೋರಿ ಅವರು ಕೇರಳ ಹೈಕೋಟ್ಗೆ ಅರ್ಜಿ ಹಾಕಿದ್ದರು. ಅಲ್ಲಿ ಅವರ ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ಅವರು ಸುಪ್ರೀಂ ಮೊರೆ ಹೋಗಿದ್ದರು.
ಇಂದು ತೀರ್ಪು ನೀಡಿರುವ ಸುಪ್ರೀಂ, ನಂಬಿ ನಾರಾಯಣನ್ ಅವರ ಬಂಧನ ಅನಗತ್ಯವಾಗಿತ್ತು ಎಂದು ಅಭಿಪ್ರಾಯಿಸಿದೆ. ಅಲ್ಲದೇ ರೂ.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.