ಸುಶಿಕ್ಷತ ಸಮಾಜದ ನಿರ್ಮಾಣ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ದೇಶದ ಐಎಎಸ್ ಅಧಿಕಾರಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರನ್ನೂ ಶಿಕ್ಷಿತರನ್ನಾಗಿಸಿದ್ದು ಶಿಕ್ಷಕರು. ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ಇಡೀ ಊರೇ ಶಿಕ್ಷಣ ಪಡೆಯಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಉತ್ತರಪ್ರದೇಶದ ಶಿಕ್ಷಕ ಡಾ.ಮಹೇಂದ್ರ ಪ್ರಸಾದ್.
ಚಿತ್ರಕೂಟ ತೆಹ್ಸಿಲ್ನ ರಾಯ್ಪುರ ಗ್ರಾಮದಲ್ಲಿ ಒಂದು ಕಾಲದಲ್ಲಿ ಗುಣಮಟ್ಟದ ಶಿಕ್ಷಣವೆಂಬುದು ಮರೀಚಿಕೆಯಾಗಿತ್ತು, ಆದರೆ ಮಹೇಂದ್ರ ಪ್ರಸಾದ್ ಅವರ ಶ್ರಮದಿಂದಾಗಿ ಇಂದು ಆ ಗ್ರಾಮದಲ್ಲಿ 30 ಮಂದಿ ಐಎಎಸ್, ಐಪಿಎಸ್, ಪಿಸಿಎಸ್ ಅಧಿಕಾರಿಗಳಾಗಿದ್ದಾರೆ.
ಆಲೌನ್ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಪ್ರಸಾದ್, ಈ ಗ್ರಾಮವನ್ನು ಶಿಕ್ಷಿತಗೊಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಬಿಡುವಿನ ವೇಳೆಯಲ್ಲಿ ಇಲ್ಲಿನ ಮಕ್ಕಳಿಗೆ ಸಹಾಯ ಮಾಡಲಾರಂಭಿಸಿದರು. 1993ರಲ್ಲಿ ನಿವೃತ್ತಿಯಾದ ಬಳಿಕ ರಾಯ್ಪುರಕ್ಕೆ ಬಂದು ನೆಲೆಸಿದ ಅವರು, ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸದತ್ತ ಗಮನ ನೀಡಲಾರಂಭಿಸಿದರು.
ಟ್ರಸ್ಟ್ ಸ್ಥಾಪನೆ ಮಾಡಿ ಬಡ ಮಕ್ಕಳ ಶಿಕ್ಷಣಕ್ಕೆ ಹಣಕಾಸು ನೆರವನ್ನೂ ಇವರು ನೀಡಿದರು. ಅವರ ಪ್ರಯತ್ನದ ಫಲವಾಗಿ ಇಂದು ಆ ಗ್ರಾಮದಲ್ಲಿ 30 ಮಂದಿ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಹಲವು ಮಂದಿ ಎಂಜಿನಿಯರ್, ವೈದ್ಯರಾಗಿದ್ದಾರೆ.
ಉತ್ತಮ ಶಿಕ್ಷಕನೊಬ್ಬ ಸಮಾಜವನ್ನು ಹೇಗೆ ಪರಿವರ್ತನೆ ಮಾಡಬಲ್ಲ ಎಂಬುದನ್ನು ತೋರಿಸಕೊಟ್ಟಿದ್ದಾರೆ ಡಾ.ಮಹೇಂದ್ರ ಪ್ರಸಾದ್. ಈ ಮೂಲಕ ಅವರು ಇತರ ಶಿಕ್ಷಕರಿಗೂ, ಜನರಿಗೂ ಪ್ರೇರಣಾಶೀಲರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.