ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರೇರಣೆ ನೀಡಿ ಬಂಧಿತರಾಗಿರುವ ನಗರ ನಕ್ಸಲರಿಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ನಕ್ಸಲರ ಉನ್ನತ ಮಟ್ಟದ ಸಭೆಗಳಲ್ಲಿ ಇವರುಗಳು ಭಾಗಿಯಾದ ವಿಷಯ ಹೊರಬಿದ್ದಿದೆ.
ಇತ್ತೀಚಿಗೆ ಶರಣಾಗತನಾದ ಟಾಪ್ ನಕ್ಸಲ್ ಕಮಾಂಡರ್ ಪಹಾಡ್ ಸಿಂಗ್ ಎಂಬಾತನೇ ಈ ಸ್ಫೋಟಕ ವಿಷಯವನ್ನು ಬಹಿರಂಗಪಡಿಸಿದವನು. ಬಂಧಿತ ನಗರ ನಕ್ಸಲರು ಕಾಡಿನ ನಕ್ಸಲರೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದಾರೆ ಎಂಬುದಾಗಿ ಇವನು ಹೇಳಿದ್ದಾನೆ.
ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗೌತಮ್ ನವ್ಲಕ, ವರವರ ರಾವ್, ಸುಧಾ ಭಾರಧ್ವಜ್, ಅರುಣ್ ಫಿರೇರಾ, ಫಾದರ್ ಸ್ಟ್ಯಾಮ್ ಸ್ವಾಮಿ, ಆನಂದ್ ತೆಲ್ತುಮ್ಡೆ, ವರ್ನೊನ್ ಗೊನ್ಸಾಲ್ವೆಸ್ನ್ನು ಬಂಧಿಸಲಾಗಿದ್ದು, ನಗರದಲ್ಲಿ ಕೂತು ರಾಜಾರೋಷವಾಗಿ ಆಂತರಿಕ ಭದ್ರತೆಗೆ ಅಪಾಯತಂದಿಟ್ಟು ದೇಶದ್ರೋಹ ಮಾಡುತ್ತಿರುವ ಆರೋಪ ಇವರ ಮೇಲಿದೆ.
ಗುಪ್ತವಾಗಿ ಜರುಗುತ್ತಿದ್ದ ಕಾಡಿನ ನಕ್ಸಲರ ಸಭೆಗಳಲ್ಲಿ ಬಂಧಿತರಾದ ಈ ನಗರ ನಕ್ಸಲರು ಭಾಗಿಯಾಗುತ್ತಿದ್ದರು ಎಂದು ಪಹಾಡ್ ಸಿಂಗ್ ಹೇಳಿದ್ದಾನೆ.
48 ವರ್ಷದ ಪಹಾಡ್ ಸಿಂಗ್ 18 ವರ್ಷಗಳನ್ನು ನಕ್ಸಲ್ ಚಳುವಳಿಯಲ್ಲಿ ಕಳೆದಿದ್ದಾನೆ. ಕಳೆದ ಆಗಸ್ಟ್ 24ರಂದು ಈತ ಛತ್ತೀಸ್ಗಢ ಪೊಲೀಸರಿಗೆ ಶರಣಾಗತನಾಗಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.