ಭಾರತೀಯ ರೈಲ್ವೇಯ ಬ್ರಾಡ್ ಗೇಜ್ ಹಳಿಗಳನ್ನು 100% ವಿದ್ಯುತೀಕರಣಗೊಳಿಸಲು ಮೋದಿ ಸರಕಾರವು ನಿರ್ಧರಿಸಿದೆ. ಪ್ರಸ್ತುತ ಭಾರತದ 46% ಹಳಿಗಳು ಮಾತ್ರ ವಿದ್ಯುತೀಕರಣಗೊಂಡಿವೆ. ಪ್ರಸ್ತುತ 20,000 ಕಿಲೋಮೀಟರ್ ಹಳಿಗಳ ವಿದ್ಯುತೀಕರಣದ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಇದು ಸಂಪೂರ್ಣಗೊಂಡರೆ ಭಾರತೀಯ ರೈಲ್ವೇಯ 78% ಹಳಿಗಳು ವಿದ್ಯುತೀಕರಣಗೊಂಡಂತಾಗುತ್ತದೆ. ಇನ್ನುಳಿದ 13675 ಕಿಲೋಮೀಟರ್ ಹಳಿಗಳನ್ನು 12134 ಕೋಟಿ ರುಪಾಯಿಗಳ ವೆಚ್ಚದಲ್ಲಿ ವಿದ್ಯುತೀಕರಿಸಲು ಮೋದಿ ಸರಕಾರದ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿದೆ.ವಿದ್ಯುತೀಕರಣದಿಂದಾಗಿ ರೈಲ್ವೇಯ ಡೀಸಿಲ್ ಮೇಲಿನ ಅವಲಂಬನೆಯು ನಿಂತು ಹೋಗಲಿದೆ. ಪ್ರಸ್ತುತ ರೈಲ್ವೇಯು ತನ್ನ ಡೀಸೆಲ್ ಎಂಜಿನ್ ಗಳಿಗೆ ವಾರ್ಷಿಕವಾಗಿ ಸುಮಾರು 283 ಕೋಟಿ ಲೀಟರ್ ಡೀಸೆಲ್ ಬಳಸುತ್ತಿದ್ದು ಸಂಪೂರ್ಣ ವಿದ್ಯುತೀಕರಣಹೊಂದಿದಾಗ ಸುಮಾರು 14000 ಕೋಟಿ ರುಪಾಯಿಯ ಮೊತ್ತದ ಡೀಸಿಲ್ ಬಳಕೆ ನಿಂತುಹೋಗಿ ಈ ಮೊತ್ತದ ವಿದೇಶೀ ವಿನಿಮಯವು ಕೂಡಾ ದೇಶಕ್ಕೆ ಉಳಿತಾಯವಾಗಲಿದೆ.
ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 15000 ಕಿಲೋಮೀಟರ್ ರೈಲ್ವೇ ಹಳಿಗಳು ವಿದ್ಯುತೀಕರಣಗೊಂಡಿವೆ. 2013-14 ರಲ್ಲಿ 610 ಕಿಲೋಮೀಟರ್ ಹಳಿಗಳ ವಿದ್ಯುತೀಕರಣಗೊಂಡರೆ 2017-18 ರಲ್ಲಿ 4087 ಕಿಲೋಮೀಟರ್ ಹಳಿಗಳು ವಿದ್ಯುತೀಕರಣಗೊಂಡಿವೆ.ಪ್ರಸ್ತುತ ದೇಶದಲ್ಲಿ ಸ್ವದೇಶೀ ತಂತ್ರಜ್ಞಾನದಡಿಯಲ್ಲಿ ಎಲೆಕ್ಟ್ರಿಕ್ ಎಂಜಿನ್ ಗಳು ತಯಾರಾಗುತ್ತಿದ್ದು 2017-18 ರಲ್ಲಿ 377 ಎಲೆಕ್ಟ್ರಿಕ್ ಎಂಜಿನ್ ಗಳು ತಯಾರಾಗಿವೆ. 5000 HP ಸಾಮರ್ಥ್ಯದ ಈ ಎಲೆಕ್ಟ್ರಿಕ್ ಎಂಜಿನ್ ಗಳು ಪ್ರಸ್ತುತ ಬಳಕೆಯಲ್ಲಿರುವ ಡೀಸಿಲ್ ಎಂಜಿನ್ ಗಳಿಗಿಂತ 92% ಹೆಚ್ಚು ಸಾಮರ್ಥ್ಯಶಾಲಿಯೂ ಬಲಶಾಲಿಯೂ ಆಗಿವೆ. ಈ ಎಂಜಿನ್ ಗಳ ನಿರ್ವಹಣಾ ವೆಚ್ಚವೂ ಡೀಸಿಲ್ ಎಂಜಿನ್ ಗಳಿಗಿಂತ ತುಂಬಾ ಕಡಿಮೆ.ಡೀಸಿಲ್ ಎಂಜಿನ್ ಗಳು ಒಂದು ಟನ್ ಒಂದು ಕಿಲೋಮೀಟರ್ ತೂಕವನ್ನು ಎಳೆಯಲು 5.1 ಪೈಸೆಯ ಇಂಧನವನ್ನು ಬಳಸುತ್ತಿದೆ.
ಆದರೆ ಎಲೆಕ್ಟ್ರಿಕ್ ಎಂಜಿನ್ ಗಳು ಒಂದು ಟನ್ ಒಂದು ಕಿಲೋಮೀಟರ್ ತೂಕವನ್ನು ಎಳೆಯಲು ಕೇವಲ 1.5 ಪೈಸೆಯ ವಿದ್ಯುತ್ತನ್ನು ಬಳಸುತ್ತಿದೆ. ಎಲೆಕ್ಟ್ರಿಕ್ ಎಂಜಿನ್ ಗಳ ಬಳಕೆಯಿಂದ ವಾಯು ಮಾಲಿನ್ಯವೂ ಗಣನೀಯವಾಗಿ ಕಡಿಮೆಯಾಗಲಿದೆ. ಜೊತೆಗೆ ವಿದ್ಯುತ್ ಚಾಲಿತ ರೈಲುಗಳ ವೇಗವು ಡೀಸಿಲ್ ಚಾಲಿತ ರೈಲುಗಳಿಗಿಂತ ಹೆಚ್ಚು. ಇದು ಪ್ರಯಾಣಿಕರ ಪ್ರಯಾಣದ ಅವಧಿಯನ್ನೂ ಕಡಿಮೆ ಮಾಡುತ್ತಿದೆ. ದೇಶೀ ತಂತ್ರಜ್ಞಾನದ ಬಳಕೆಯಿಂದ ವಿಶ್ವದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ರೈಲ್ವೇ ಡೀಸಿಲ್ ಎಂಜಿನ್ ಗಳನ್ನು ಇಲೆಕ್ಟ್ರಿಕ್ ಎಂಜಿನ್ ಗಳನ್ನಾಗಿ ಪರಿವರ್ತಿಸುವ ಕೆಲಸವೂ ಆಗುತ್ತಿದೆ.
Cabinet approves 100% Electrification of Broad Gauge Railway Routes. This decision will lead to greater efficiency in train operations, savings in fuel bill, reduced carbon footprint and employment generation. #ElectrifiedRailways pic.twitter.com/KSC64ZhsLa
— Piyush Goyal (@PiyushGoyal) September 12, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.