ಹೈದರಾಬಾದ್: ಈ ಬಾರಿಯ ಗಣೇಶೋತ್ಸವ ಸಂಭ್ರಮಕ್ಕೆ ಪರಿಸರ ಸ್ನೇಹಿ ಸ್ಪರ್ಶವನ್ನು ನೀಡಲು ಬೆಂಗಳೂರಿಗರು ಹೆಚ್ಚು ಉತ್ಸುಹುಕರಾಗಿದ್ದಾರೆ.
ರಾಸಾಯನಿಕಗಳಿಂದ ತಯಾರಾದ ಗಣಪನ ಮೂರ್ತಿಯನ್ನು ನೀರಿನಲ್ಲಿ ಬಿಡುವುದರಿಂದ ಜಲ ಮಾಲಿನ್ಯ ಸಂಭವಿಸುತ್ತದೆ ಎಂಬ ವರದಿಗಳು ಹೆಚ್ಚು ಹೆಚ್ಚು ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಬಹುತೇಕ ಮಂದಿ, ಮಣ್ಣು ಮತ್ತು ಇತರ ಪರಿಸರ ಸ್ನೇಹಿ ವಸ್ತುಗಳಿಂದ ಗಣಪನನ್ನು ರಚಿಸಲು ಮುಂದಾಗುತ್ತಿದ್ದಾರೆ.
ಬೆಂಗಳೂರಿನ ಸತ್ಯಸಾಯಿ ಟ್ರಸ್ಟ್ ಕಬ್ಬನ್ನು ಬಳಸಿ ಗಣಪನನ್ನು ರಚನೆ ಮಾಡಿದೆ. 21 ದಿನಗಳ ಪೂಜಾ ಕೈಂಕರ್ಯಗಳ ಬಳಿಕ, ಈ ಕಬ್ಬಗಳನ್ನು ಜನರಿಗೆ ವಿತರಣೆ ಮಾಡಲಾಗುತ್ತದೆ ಎಂದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ.
ಗಣಪನ ಅದ್ಭುತ ಮೂರ್ತಿ ರಚನೆಗೆ 5 ಟನ್ಗಳಷ್ಟು ಕಬ್ಬನ್ನು ಬಳಕೆ ಮಾಡಲಾಗಿದೆ, ಅವಿನಾಶ್ ಎಂಬ ಕಲಾವಿದನ ನೇತೃತ್ವದ ತಂಡ ಒಂದೂವರೆ ತಿಂಗಳುಗಳ ಅವಧಿ ತೆಗೆದುಕೊಂಡು ಈ ಗಣಪನನ್ನು ರಚನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.