ನವದೆಹಲಿ: ಸೆ.15ರಿಂದ ‘ಸ್ವಚ್ಚತಾ ಹೀ ಸೇವಾ ಚಳುವಳಿ’ಯನ್ನು ಆರಂಭಿಸಲಾಗುತ್ತಿದೆ. ಈ ದಿನ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಯನ್ನು ಸಾಧಿಸಲು ಶ್ರಮಿಸಿದವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಬಳಿಕ ಸ್ವಚ್ಚತಾ ಚಟುವಟಿಕೆ ಜರುಗಲಿದೆ.
ಈ ಬಗ್ಗೆ ಸರಣಿ ಟ್ವೀಟ್ಗಳ ಮೂಲಕ ಮಾಹಿತಿ ನೀಡಿರುವ ಮೋದಿ, ವೀಡಿಯೋವನ್ನೂ ಹಂಚಿಕೊಂಡಿದ್ದಾರೆ. ‘ಸ್ವಚ್ಛತಾ ಹೀ ಸೇವಾ ಚಳುವಳಿ ಸೆ.15ರಿಂದ ಆರಂಭಗೊಳ್ಳಲಿದೆ. ಇದು ಮಹಾತ್ಮ ಗಾಂಧೀಜಿಯವರಿಗೆ ನಾವು ನೀಡುವ ಶ್ರೇಷ್ಠ ಶ್ರದ್ಧಾಂಜಲಿ. ಬನ್ನಿ, ಈ ಚಳುವಳಿಯ ಭಾಗವಾಗಿ, ಸ್ವಚ್ಛ ಭಾರತವನ್ನು ರಚಿಸುವ ಪ್ರಯತ್ನವನ್ನು ಬಲಗೊಳಿಸಿ’ ಎಂದಿದ್ದಾರೆ.
‘ಸೆ.15ರಂದು ಬೆಳಿಗ್ಗೆ 9.30ರ ಸುಮಾರಿಗೆ ನಾವೆಲ್ಲ ಒಟ್ಟುಗೂಡಿ, ಸ್ವಚ್ಛತಾ ಹೀ ಸೇವಾ ಚಳುವಳಿಯ ಪ್ರಾರಂಭವನ್ನು ಸಾಕ್ಷೀಕರಿಸಲಿದ್ದೇವೆ. ಸ್ವಚ್ಛ ಭಾರತ ಅಭಿಯಾನಕ್ಕಾಗಿ ದುಡಿದ ಸಾಧಕರೊಂದಿಗೆ ಸಂವಾದ ನಡೆಸಲಿದ್ದೇನೆ. ಬಳಿಕ ಸ್ವಚ್ಛತಾ ಚಟುವಟಿಕೆ ಜರುಗಲಿದೆ’ ಎಂದಿದ್ದಾರೆ.
‘ಅ.2ರಂದು ಗಾಂಧೀಜಿಯವರ 150ನೇ ಜನ್ಮದಿನ. ಇದೇ ದಿನ ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷ ತುಂಬಲಿದೆ. ಈ ಐತಿಹಾಸಿಕ ಅಭಿಯಾನವನ್ನು ಬಾಪುಜಿಯವರ ಸ್ವಚ್ಛತೆಯ ಕನಸು ನನಸಾಗಿಸುವ ನಿಟ್ಟಿನಲ್ಲಿ ಆರಂಭಿಸಲಾಯಿತು. ಸ್ವಚ್ಛ ಭಾರತಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ನನ್ನ ಸೆಲ್ಯೂಟ್’ ಎಂದಿದ್ದಾರೆ.
The ‘Swachhata Hi Seva Movement’ commences on 15th September. This is a great way to pay tributes to Bapu.
Come, be a part of this movement and strengthen the efforts to create a Swachh Bharat! pic.twitter.com/c7wCxPBbUL
— Narendra Modi (@narendramodi) September 12, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.