ನವದೆಹಲಿ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಗೌರಿ ಗಣೇಶ ಹಬ್ಬದ ಬಂಪರ್ ಕೊಡುಗೆಯನ್ನು ಪ್ರಕಟಿಸಿದ್ದಾರೆ. ಅಕ್ಟೋಬರ್ಗೆ ಅನ್ವಯವಾಗುವಂತೆ ಈ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಿದ್ದಾರೆ.
ಮಂಗಳವಾರ ಕಾರ್ಯಕರ್ತೆಯರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಮೋದಿ, ಈ ಶುಭ ಸಮಾಚಾರವನ್ನು ಪ್ರಕಟ ಮಾಡಿದ್ದಾರೆ.
ಪ್ರಸ್ತುತ 3 ಸಾವಿರ ರೂಪಾಯಿಗಳ ಗೌರವಧನ ಪಡೆಯುತ್ತಿರುವ ಕಾರ್ಯಕರ್ತೆಯರಿಗೆ ಇನ್ನು ಮುಂದೆ ರೂ.4,500 ಸಿಗಲಿದೆ. ರೂ.2,200 ಪಡೆಯುತ್ತಿರುವವರಿಗೆ ರೂ.3,500 ಸಿಗಲಿದೆ. ರೂ.1,500 ಪಡೆಯುತ್ತಿರುವ ಅಂಗನವಾಡಿ ಸಹಾಯಕಿಯರ ಗೌರವಧನ ರೂ.2,500ಕ್ಕೆ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರದ ಗೌರವಧನಗಳೂ ಸೇರಿ ರೂ.4ಸಾವಿರದಿಂದ ರೂ.8,000ದವರೆಗೆ ಇವರು ವೇತನವನ್ನು ಪಡೆಯುತ್ತಿದ್ದಾರೆ. ಸದ್ಯ ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.8,000 ಮತ್ತು ಸಹಾಯಕಿಯರಿಗೆ ರೂ.4,000 ವೇತನ ಸಿಗುತ್ತಿದೆ, ಇನ್ನು ಮುಂದೆ ಇದು ಕ್ರಮವಾಗಿ ರೂ.9,500 ಮತ್ತು ರೂ.5,000ಗೆ ಹೆಚ್ಚಳವಾಗಲಿದೆ.
ಅಲ್ಲದೇ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಉಚಿತವಾಗಿ ಒದಗಿಸುವುದಾಗಿ ಮೋದಿ ಘೋಷಣೆ ಮಾಡಿದ್ದಾರೆ. ಇವರ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಇದರಿಂದ ಇವರಿಗೆ ಸಾಮಾಜಿಕ ಭದ್ರತೆ ಸಿಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.