ನವದೆಹಲಿ: ವೀಕ್ಷಕರಿಗೆ ತ್ವರಿತವಾಗಿ ಸುದ್ದಿಯನ್ನು ಮುಟ್ಟಿಸಲು ಅನುವುಮಾಡಿಕೊಡುವ ನಿಟ್ಟಿನಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸೋಮವಾರ 9 ಹೊಸ ಪ್ರಸಾರ ವಾಹನಗಳಿಗೆ ಚಾಲನೆಯನ್ನು ನೀಡಿದ್ದಾರೆ.
ಸಾರ್ವಜನಿಕ ಸೇವಾ ಪ್ರಸಾರಕ ದೂರದರ್ಶನ್(ಡಿಎನ್ಎಸ್ಜಿ) ಈ ವ್ಯಾನ್ಗಳನ್ನು ಅಳವಡಿಸಿದ್ದು, ವೀಕ್ಷಕರಿಗೆ ನಿಜಾವಧಿಯ ಸುದ್ದಿಯನ್ನು ತಲುಪಿಸಲು ಇದರಿಂದ ಸಹಾಯಕವಾಗಲಿದೆ. 9 ವ್ಯಾನ್ಗಳ ಪೈಕಿ ನಾಲ್ಕು ವ್ಯಾನ್ಗಳು ಈಶಾನ್ಯ ಭಾಗವಾದ ಗಂಗ್ಟೋಕ್, ಕೊಹಿಮಾ, ಇಂಫಾಲ, ಅಗರ್ತಾಲಗಳಿಗೆ ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್, ‘ಬಿಜೆಪಿ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿಯನ್ನು ಉತ್ತೇಜಿಸುತ್ತಿದೆ, ಈ ನಿಟ್ಟಿನಲ್ಲಿ ಈಶಾನ್ಯ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ಜರುಗುತ್ತಿವೆ. ಪ್ರಸಾರ ವ್ಯಾನ್ಗಳ ನಿಯೋಜನೆಯ ಮೂಲಕ ಈಶಾನ್ಯದ ಯಶೋಗಾಥೆ ದೇಶದ ಜನರನ್ನು ತಲುಪಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.