ನವದೆಹಲಿ : ನೋಟು ನಿಷೇಧದಿಂದ ಅತಿ ಹೆಚ್ಚು ನಷ್ಟವಾಗಿದ್ದೆಂದರೆ ಅದು ಗಾಂಧಿ ಕುಟುಂಬಕ್ಕೆ ಮಾತ್ರ. ಹೀಗಾಗಿಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅನಾಣ್ಯೀಕರಣದ ಕುರಿತು ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ.
ಬಹಳಷ್ಟು ವರ್ಷಗಳಿಂದ ಗಾಂಧಿ ಕುಟುಂಬ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದಿದೆ. ಅನಾಣ್ಯೀಕರಣದ ನಂತರ ಲೂಟಿ ಹೊಡೆದ ಹಣವೆಲ್ಲವೂ ಅವರ ಬಳಕೆಗೆ ಬರದಂತಾಗಿದೆ. ಹೀಗಾಗಿಯೇ ಅವರು ಅನಾಣ್ಯೀಕರಣದ ಕುರಿತು ಪದೇ ಪದೇ ಮಾತನಾಡುತ್ತಾರೆ ಎಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಹೇಳಿದರು.
ರಾಹುಲ್ ಗಾಂಧಿ ಅವರು ಗಂಭೀರತೆಯೇ ಇಲ್ಲದಂತಹ ರಾಜಕಾರಣಿ. ಅವರಿಗೆ ಟೀಕೆ ಮಾಡುವುದಕ್ಕೆ ಹೊಸತೇನೂ ಸಿಗುತ್ತಿಲ್ಲ. ಹೀಗಾಗಿ ಹೇಳಿದ್ದನ್ನೇ ಹೇಳುತ್ತಿರುತ್ತಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಏನು ಹೇಳಿದ್ದರೋ ಅದನ್ನೇ ಇಂದೂ ಮಾತನಾಡುತ್ತಿದ್ದಾರೆ. ಆದರೆ ಜನರು ಪ್ರಜಾಪ್ರಭುತ್ವದ ಅತ್ಯುತ್ತಮ ನ್ಯಾಯಾಧೀಶರು. ಅವರು ಮೋದಿಯನ್ನೇ ಆಯ್ಕೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಲ್ಲದೆ ಅದರ ಅಧ್ಯಕ್ಷ ರಾಹುಲ್ ಗಾಂಧಿಯನ್ನೂ ತಿರಸ್ಕರಿಸಿದ್ದಾರೆ ಎಂದು ಸಂಬಿತ್ ಪಾತ್ರಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಂಡವಾಳ ಶಾಹಿ ಕುಳಗಳಿಗೆ ಸಹಾಯವಾಗಲು ನೋಟು ನಿಷೇಧವನ್ನು ಮಾಡಿದೆ. ಇದರಿಂದ ಸಾಮಾನ್ಯ ಜನರು ಕಷ್ಟ ಅನುಭವಿಸುವಂತಾಗಿದೆ. ಇದು ದೊಡ್ಡ ಪ್ರಮಾದ. ಇದು ಒಂದು ದೊಡ್ಡ ಹಗರಣಕ್ಕೆ ಸಮಾನ. ಇದಕ್ಕಾಗಿ ಪ್ರಧಾನಿ ಮೋದಿ ಕ್ಷಮೆ ಕೇಳಬೇಕು ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿ ಹೇಳಿಕೆಗೆ ಸಾಂಬಿತ್ ಪಾತ್ರಾ ಅವರು ನೋಟು ನಿಷೇಧದಿಂದ ಗಾಂಧಿ ಕುಟುಂಬಕ್ಕೆ ಮಾತ್ರ ಹೆಚ್ಚು ನಷ್ಟವಾದದ್ದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.