ಭೂಪಾಲ್: ಬಲಪಂಥೀಯ ಸಂಘಟನೆಯ ಕಾರ್ಯಕರ್ತ ಸುನಿಲ್ ಜೋಶಿ ಹತ್ಯೆಗೆ ಸಂಬಂಧಿಸಿದಂತೆ 9 ವರ್ಷಗಳ ನಂತರ ಸಾಧ್ವಿ ಪ್ರಗ್ಯಾ ಸಿಂಗ್ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಿಡುಗಡೆಗೊಳಿಸಿ ದಿವಾಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
2007 ರ ಡಿಸೆಂಬರ್ 29 ರಂದು ದೇವಾಸ್ ಪಟ್ಟಣದ ಚೌನಾ ಖದಾನ್ ಪ್ರದೇಶದ ಬಳಿ ಅವರ ಮೇಲೆ ಹಲ್ಲೆಯಾಗಿತ್ತು.
ಉಗ್ರರ ಸಂಪರ್ಕದ ಸಂಶಯದ ಹಿನ್ನೆಲೆಯಲ್ಲಿ ಜೋಶಿ ಕೊಲೆ ಪ್ರಕರಣದ ತನಿಖೆಯನ್ನು 2011 ರಲ್ಲಿ ಎನ್ಐಎಗೆ ವಹಿಸಲಾಗಿತ್ತು. ಮೂರು ವರ್ಷಗಳ ನಂತರ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿ, ಈ ಕೊಲೆಯ ಹಿಂದೆ ದೊಡ್ಡ ಪಿತೂರಿ ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ತಿಳಿಸಿತ್ತು.
2014 ರ ಸೆಪ್ಟೆಂಬರ್ನಲ್ಲಿ ಇದರ ವಿಚಾರಣೆಯು ದೆವಾಸ್ಗೆ ವರ್ಗಾವಣೆಗೊಂಡಿತು. 2015 ರಲ್ಲಿ ಸೆಷನ್ ಕೋರ್ಟ್ ಸಾಧ್ವಿ ಪ್ರಗ್ಯಾ ಹಾಗೂ ಇತರ 7 ಜನರ ವಿರುದ್ಧ ದೋಷಾರೋಪಗಳನ್ನು ಸಿದ್ಧಪಡಿಸಿತ್ತು.
8 ಜನ ಆರೋಪಿಗಳಲ್ಲಿ 5 ಜನರು ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸುವಾಗ ಹಾಜರಿದ್ದರು. ಭೂಪಾಲ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಗ್ಯಾ ಸಿಂಗ್ ಅನಾರೋಗ್ಯದ ಕಾರಣ ಹಾಜರಿರಲಿಲ್ಲ ಎಂದು ಸರ್ಕಾರಿ ಅಭಿಯೋಜಕ ಗಿರೀಶ ಮುಂಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.