ಮಾನಿಲಾ: ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜ್ವಾಡ ವಿಲ್ಸನ್ ಹಾಗೂ ಚೆನ್ನೈಯ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎಂ. ಕೃಷ್ಣ ಅವರು 2016ರ ಪ್ರತಿಷ್ಠಿತ ರಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭಾರತದ ಈ ಇಬ್ಬರು ಅಲ್ಲದೆ ಫಿಲಿಪೈನ್ಸ್ನ ಕಾಂಚಿತಾ ಕಾರ್ಪಿಯೋ ಮೊರೇಲ್ಸ್, ಇಂಡೋನೇಶ್ಯಾದ ಡಂಪೆಟ್ ಧುವಾಫಾ, ಜಪಾನ್ ಸಾಗರೋತ್ತರ ಸಹಕಾರ ಕಾರ್ಯಕರ್ತರು ಹಾಗೂ ಲಾವೋಸ್ನ ‘ವಿಯಟಿನ್ ರೆಸ್ಕ್ಯೂ’ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಸಫಾಯಿ ಕರ್ಮಚಾರಿ ಆಂದೋಲನ (ಎಸ್ಕೆಎ)ದ ರಾಷ್ಟ್ರೀಯ ಸಂಚಾಲಕ ವಿಲ್ಸನ್ ‘ಮಾನವನ ಗೌರಯುತ ಜೀವನ ಹಕ್ಕುಗಳಿಗೆ ಅವರು ನಡೆಸುತ್ತಿರುವ ಹೋರಾಟ ನಡೆಸುತ್ತಿದ್ದು, ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಮಾಜಿಕ ಜಾತಿಯಾಧಾರಿತ ಮನ್ನಣೆಯ ಒಳಗೊಳ್ಳುವಿಕೆ ವಿರುದ್ಧ ಸಂಗೀತದ ಮೂಲಕ ಧ್ವನಿ ಎತ್ತಿರುವ ಟಿ.ಎಂ. ಕೃಷ್ಣ ಅವರನ್ನು ಆಯ್ಕೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.