ತಂಜಾವೂರ್: ಒಂದೆಡೆ ಕೋಟಿಗಟ್ಟಲೆ ಸಾಲ ಪಡೆದಿರುವ ವಿಜಯ್ ಮಲ್ಯ ವಿದೇಶ ಹಾರಿದ್ದಾರೆ. ಮತ್ತೊಂದೆಡೆ ರೈತನೋರ್ವ 1.3 ಲಕ್ಷ ಬ್ಯಾಂಕ್ ಸಾಲ ಪಾವತಿಸದಿದ್ದಕ್ಕೆ ಪೊಲೀಸರು ಆತನನ್ನು ಮನಬಂದಂತೆ ಹೊಡೆದಿರುವ ಘಟನೆ ತಮಿಳುನಾಡಿನ ತಂಜಾವೂರ್ನಲ್ಲಿ ನಡೆದಿದೆ.
ತಂಜಾವೂರ್ನ ರೈತ ಜಿ. ಬಾಲನ್ ಮೇಲೆ ವಸೂಲಾತಿ ಮಾಡುವವರು ದಾಳಿ ನಡೆಸಿದ್ದು, ಅವರನ್ನು ಥಳಿಸಿದ್ದಾರೆ. ಬ್ಯಾಂಕಿನ ಆದೇಶದಂತೆ ವಸೂಲಾತಿ ಮಾಡುವವರು ಬಾಲನ್ ಅವರ ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ಬಂದಾಗ ಈ ಘಟನೆ ನಡೆದಿದೆ.
ಈ ಕುರಿತು ಬಾಲನ್ ಅವರ ಪತ್ನಿ, ‘ನಾವು 2011 ರಲ್ಲಿ 3.4 ಲಕ್ಷ ರೂ. ಬ್ಯಾಂಕ್ ಸಾಲ ಪಡೆದಿದ್ದು, ಇದನ್ನು ಬಡ್ಡಿ ಸಹಿತ 4.1 ಲಕ್ಷ ಈಗಾಗಲೇ ಪಾವತಿಸಲಾಗಿದೆ. ಬೆಳೆ ನಾಶದ ಕಾರಣ ಕಳೆದ ಎರಡು ಕಂತಿನ 1.3 ಲಕ್ಷ ರೂ. ಸಾಲ ಪಾವತಿಸಲಾಗಿಲ್ಲ. ಆದರೆ ಕೋಟ್ಯಂತರ ರೂ. ಸಾಲ ಹೊಂದಿರುವ ವಿಜಯ್ ಮಲ್ಯ ಅವರಿಗೆ ನೋಟಿಸ್ ಜಾರಿಗೊಳಿಸಿದ ಬಳಿಕವೂ ಅವರು ದೇಶವನ್ನೇ ಬಿಟ್ಟು ಹೋಗಿದ್ದಾರೆ. ಆದರೆ ನಮ್ಮಂತಹ ಬಡ ರೈತರು ಮಾತ್ರ ಕಿರುಕುಳ ಅನುಭವಿಸುತ್ತಿದ್ದಾರೆ. ಇದು ಯಾವ ನ್ಯಾಯ?’ ಎಂದು ಕೇಳಿದ್ದಾರೆ.
ಜಿ. ಬಾಲನ್ ಮೇಲೆ ವಸೂಲಾತಿ ಮಾಡುವವರು ದಾಳಿ ನಡೆಸಿ ಥಳಿಸಿದ್ದನ್ನು ಯಾರೋ ಚಿತ್ರೀಕರಣ ಮಾಡಿದ್ದಾರೆ. ವಿಡಿಯೋದಲ್ಲಿ ಪೊಲೀಸರು ಸಹ ಇದ್ದಾರೆ.
ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ಬ್ಯಾಂಕ್ ನ್ಯಾಯಾಲಯದ ಆದೇಶ ಪಡೆದುಕೊಂಡಿದೆ. ಸಾಲ ವಸೂಲಾತಿಗೆ ನೇಮಕಗಗೊಂಡವರ ರಕ್ಷಣೆಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪ್ರಧಾನ ಪೊಲೀಸ್ ನಿರೀಕ್ಷಕ ಸೆಂಥಮರೈ ಕಣ್ಣನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.