ಮುಂಬೈ : ಕುಖ್ಯಾತ ಪಾತಕಿ ಛೋಟಾ ರಾಜನ್ ಇಂಡೋನೇಷ್ಯಾದ ಬಾಲಿಯಲ್ಲಿ ಬಂಧಿತನಾಗಿದ್ದು, ಮುಂಬೈ ನಗರದ ಪಾತಕ ಲೋಕದ ಮೇಲೆ ಆತನ ಹಿಡಿತವಿದ್ದ ಕಾರಣ ಈ ಪ್ರಕರಣದ ಮೇಲೆ ಮಹಾರಾಷ್ಟ್ರ ಸರಕಾರ ಕಾರ್ಯಾಚರಿಸುತ್ತಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫೆಡ್ನವೀಸ್ ಹೇಳಿದ್ದಾರೆ.
ಛೋಟಾ ರಾಜನ್ ತನ್ನ ವಿಚಾರಣೆ ಎದುರಿಸುವನೋ ಅಥವಾ ಆತ ತನ್ನ ತಪ್ಪನ್ನು ಒಪ್ಪಿಕೊಂಡು ಶರಣಾಗುವನೋ ಕಾದುನೋಡಬೇಕಾಗಿದೆ. ಈ ವಿಷಯ ಕುರಿತು ಕೇಂದ್ರ ಸರಕಾರ ಕಳೆದ ಒಂದು ತಿಂಗಳಿನಿಂದ ಮಹಾರಾಷ್ಟ್ರ ಸರಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಮಹಾರಾಷ್ಟ್ರ ಸರಕಾರ ಛೋಟಾ ರಾಜನ್ ಬಗ್ಗೆ ಮಹತ್ವದ ಸಾಕ್ಷಿ ಮತ್ತು ಮಾಹಿತಿಗಳನ್ನು ಸರಕಾರಕ್ಕೆ ನೀಡುತ್ತಿದ್ದು ಕೇಂದ್ರ ಸರಕಾರ ಆತನನ್ನು ಭಾರತಕ್ಕೆ ಕರೆತರಲು ಎಲ್ಲಾ ವಿಧದಲ್ಲೂ ಸಹಕಾರ ನೀಡುತ್ತಿದೆ ಎಂದರು.
ಮಹಾರಾಷ್ಟ್ರ ಪೊಲೀಸರು ಆತನ ವಿಚಾರಣೆ ನಡೆಸಲಿದ್ದು, ಇಲ್ಲಿಯ ಪಾತಕ ಲೋಕದ ಜಾಡು ಹಿಡಿಯಲು ಅದು ಸಹಕಾರಿಯಾಗಲಿದೆ. ಅಲ್ಲದೇ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಬಗ್ಗೆ ಮಹತ್ವದ ಮಾಹಿತಿ ಆತನ ಮೂಲಕ ತಿಳಿದು ಬರಲಿದೆ ಎಂದವರು ಹೇಳಿದ್ದಾರೆ.
ಛೋಟಾ ರಾಜನ್ ಶನಿವಾರ ಮಧ್ಯಾಹ್ನ ತನ್ನ ಆಪ್ತ ಸಹಚರರೊಂದಿಗೆ ಮಾತುಕತೆ ನಡೆಸಿದ್ದು ತನಗೆ ಆಸ್ಟ್ರೇಲಿಯಾ ಸುರಕ್ಷಿತವಲ್ಲ. ತಾನು ಇಲ್ಲಿಂದ ಬೇರೆಡೆ ಹೋಗಲು ಚಿಂತಿಸುತ್ತಿದ್ದೇನೆ ಎಂದು ಮಾತನಾಡುತ್ತಿದ್ದ ಕರೆಯನ್ನು ಭಾರತದ ಗುಪ್ತಚರ ದಳದ ಸಂಸ್ಥೆ ಟ್ಯಾಪ್ ಮಾಡಿತ್ತು ಈ ಮೂಲಕ ಆತನನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಸಿಬಿಐ, ಅಪರಾಧ ಗುಪ್ತಚರ ಘಟಕ ಮುಂಬೈ ಕ್ರೈಂ ಬ್ರಾಂಚ್, ಆಸ್ಟ್ರೇಲಿಯಾ ಪೊಲೀಸ್ ಮತ್ತು ಇಂಡೋನೇಷ್ಯಾ ಪೊಲೀಸ್ ಪರಸ್ಪರ ಸರಕಾರ ನೀಡುತ್ತಿದ್ದು, ಸರ್ಕಾರದ ಮೂಲಗಳು ರಾಜನ್ ಆಸ್ಟ್ರೇಲಿಯಾದಲ್ಲಿ ವೀಸಾ ವಿಸ್ತರಣೆ ಅರ್ಜಿ ಸಲ್ಲಿಸಿದಾಗ ಆಸ್ಟ್ರೇಲಿಯಾದ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಎಚ್ಚರಿಸಿದ್ದರು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.