ಮಂಗಳೂರು: ವಜ್ರದೇಹಿ ಮಠ ಗುರುಪುರದ ಸ್ವಾಮೀಜಿಗಳಾದ ಶ್ರೀ ರಾಜಶೇಕರಾನಂದ ಸ್ವಾಮೀಜಿ ಅವರು ಇಂದು ಕದ್ರಿ ದ್ವಾರದ ಬಳಿಯ ಶ್ರೀಕೃಷ್ಣ ಮಂದಿರ ನ೦ದಿ ರಥಯಾತ್ರೆಯ ಸಮಾರೋಪ ಸಮಾರಂಭ ನೇರವೇರಿಸಿದರು ಮತ್ತು ಕಾರ್ಯಾಲಯದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಶಾಸಕ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿ ಮಠ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ,ಆಶೀರ್ವಚನ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.
ಗೋ ಸೇವಾ ಗತಿವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶ್ರೀ ಪ್ರವೀಣ ಸರಳಾಯ ಅವರು ಪ್ರಾಸ್ತಾವಿಕ ಮಾತನಾಡಿದರು.ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಗಿರಿಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಶೇರಣವ, ಶಾಸಕರಾದ ಶ್ರೀಯುತ ಭರತ್ ಶೆಟ್ಟಿ ಹಾಗೂ ಶ್ರೀಯುತ ವೇದವ್ಯಾಸ ಕಾಮತ್, ರಾಧಾ ಸುರಭಿ ಗೋ ಮಂದಿರದ ಶ್ರೀಯುತ ಭಕ್ತಿ ಭೂಷಣ ಜಿ, ಮೊದಲಾದವರು ಉಪಸ್ಥಿತರಿ ದ್ದರು. ಪ್ರಧಾನ ಕಾರ್ಯದರ್ಶಿ ಜಗದೀಶ ಶೇಣವ ಅವರು ಸ್ವಾಗತಿಸಿದರು.ಸುಧಾಕರ್ ರಾವ್ ಪೇಜಾವರ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮನೋಹರ್ ಶೆಟ್ಟಿ ಕದ್ರಿ ಅವರು ವಂದನಾರ್ಪಣೆ ಗೈದರು.
ಶ್ರೀಯುತ ಎಚ್ ಕೆ ಪುರುಷೋತ್ತಮ್, ಹರಿಕೃಷ್ಣ ಮಂಗಳೂರು, ಭೋಜರಾಜ ಕಲ್ಲಡ್ಕ, ಗಂಗಾಧರ್ ಪೆರ್ಮಂಕಿ, ಬಸವರಾಜ ಬಿರಾದಾರ, ತಾರಾನಾಥ ಕೊಟ್ಟಾರಿ, ಅನಿಲ್ ಪಂಡಿತ್, ವಿನಯ್, ಸಂದೇಶ್ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.