ನವದೆಹಲಿ: ಯುಕೆಯಿಂದ 19 ನೇ ಶತಮಾನದ ಮಹಾರಾಜ ರಂಜಿತ್ ಸಿಂಗ್ ಅವರ ಚಿನ್ನದ ಸಿಂಹಾಸನವನ್ನು ಭಾರತಕ್ಕೆ ವಾಪಾಸ್ ತರಬೇಕು ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಬುಧವಾರ ಸಂಸತ್ತಿನಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೆಸರಾಂತ ಅಕ್ಕಸಾಲಿಗರಾದ ಹಫೀಜ್ ಮುಹಮ್ಮದ್ ಮುಲ್ತಾನಿ ಅವರು 1805 ಮತ್ತು 1810 ರ ನಡುವೆ ರಂಜಿತ್ ಸಿಂಗ್ಗಾಗಿ ಭವ್ಯವಾದ ಸಿಂಹಾಸನವನ್ನು ರಚಿಸಿದರು, ಈ ಸಿಂಹಾಸನ ಮಹಾರಾಜರ ಆಸ್ಥಾನದ ವೈಭವವನ್ನು ಸಂಕೇತಿಸುತ್ತದೆ. ಇದನ್ನು ಯುಕೆ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದ್ದು, ಭಾರತಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಸಿಂಹಾಸನವು ದಪ್ಪವಾದ ಚಿನ್ನದ ಹಾಳೆಯಿಂದ ಮುಚ್ಚಲ್ಪಟ್ಟಿದೆ ಮತ್ತು ಹೆಚ್ಚು ಅಲಂಕರಿಸಲ್ಪಟ್ಟಿದೆ. ಸಿಂಹಾಸನದ ತಳಹದಿಯು ಎರಡು ಹಂತದ ಕಮಲದ ದಳಗಳಿಂದ ಕೂಡಿದ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ, ಇದು ಶುದ್ಧತೆ ಮತ್ತು ಸೃಷ್ಟಿಯ ಸಂಕೇತವಾಗಿದೆ, ಇದನ್ನು ಸಾಂಪ್ರದಾಯಿಕವಾಗಿ ಹಿಂದೂ ದೇವರುಗಳಿಗೆ ಶಿಲ್ಪಕಲೆ ಮತ್ತು ಚಿತ್ರಕಲೆಯಲ್ಲಿ ಬಳಸಲಾಗುತ್ತದೆ ಮತ್ತು ಸಿಖ್ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಈ ಸಿಂಹಾಸನ ರಂಜಿತ್ ಸಿಂಗ್ ಅವರ ಸಾಮರ್ಥ್ಯ ಮತ್ತು ಪರಂಪರೆಯ ದ್ಯೋತಕವಾಗಿದೆ ಎಂದು ಬಣ್ಣಿಸಿದ್ದಾರೆ.
ಈ ಸಿಂಹಾಸನ ಈಗ ಯುಕೆಯ ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಂನಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.