ನವದೆಹಲಿ: ಭಾರತವು 2023ರ ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರಿಗೆ ಆಹ್ವಾನವನ್ನು ನೀಡಿದೆ.
ಕೈರೋದೊಂದಿಗಿನ ತನ್ನ ರಾಜಕೀಯ ಮತ್ತು ಮಿಲಿಟರಿ ಸಂಬಂಧಗಳನ್ನು ಬಲಪಡಿಸುವ ಭಾರತದ ಪ್ರಯತ್ನಗಳ ಭಾಗವಾಗಿ ಜನವರಿ 26, 2023 ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರನ್ನು ಭಾರತ ಆಹ್ವಾನಿಸಿದೆ ಎಂದು ವರದಿಗಳು ತಿಳಿಸಿವೆ.
ಈಜಿಪ್ಟ್ ಅಧ್ಯಕ್ಷ ಎಲ್ ಸಿಸಿಗೆ ಆಹ್ವಾನವನ್ನು ಆಫ್ರಿಕನ್ ಖಂಡದಲ್ಲಿ ಭಾರತದ ಪ್ರಭಾವ ವಿಸ್ತರಣೆಯ ಭಾಗ ಎಂದು ಪರಿಗಣಿಸಲಾಗಿದೆ, ಈಜಿಪ್ಟ್ ಆಫ್ರಿಕಾದಲ್ಲಿ 2ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈ ವರ್ಷ, ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ.
ಅಧ್ಯಕ್ಷ ಸಿಸಿಗೆ ಆಹ್ವಾನದಿಂದ ದೆಹಲಿ-ಕೈರೋ ಸಂಬಂಧಗಳು ಮುಂಬರುವ ಕೆಲವು ತಿಂಗಳುಗಳು ಮತ್ತು ವರ್ಷಗಳಲ್ಲಿ ವಿಶೇಷ ಗಮನವನ್ನು ಪಡೆಯುತ್ತವೆ. ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಬ್ಬರೂ ಈ ವರ್ಷದ ಆರಂಭದಲ್ಲಿ ಈಜಿಪ್ಟ್ ದೇಶಕ್ಕೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ಸಮಯದಲ್ಲಿ, ಇಬ್ಬರೂ ಮಂತ್ರಿಗಳು ಈಜಿಪ್ಟ್ ಅಧ್ಯಕ್ಷರನ್ನು ಭೇಟಿಯಾದರು, ಜೈಶಂಕರ್ ಸಿಸಿಗೆ ಪ್ರಧಾನಿ ಮೋದಿಯವರ ವೈಯಕ್ತಿಕ ಸಂದೇಶ ಹಸ್ತಾಂತರಿಸಿದರು.
ಅಧ್ಯಕ್ಷ ಸಿಸಿ ಸೆಪ್ಟೆಂಬರ್ 2016 ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಅಕ್ಟೋಬರ್ 2015 ರಲ್ಲಿ ನವದೆಹಲಿಯಲ್ಲಿ ನಡೆದ ಮೂರನೇ ಭಾರತ-ಆಫ್ರಿಕಾ ಫೋರಂ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಿಸಿ ಅವರನ್ನು ಭೇಟಿಯಾದರು. ಅದೇ ವರ್ಷ, ಎರಡೂ ನಾಯಕರು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಭೇಟಿಯಾದರು.
2023ರ ಸೆಪ್ಟೆಂಬರ್ನಲ್ಲಿ ನವದೆಹಲಿಯಲ್ಲಿ ಆತಿಥ್ಯ ವಹಿಸಲಿರುವ G20 ಶೃಂಗಸಭೆಗೆ ಭಾರತದಿಂದ ಆಹ್ವಾನಿಸಲಾದ ಒಂಬತ್ತು ದೇಶಗಳಲ್ಲಿ ಉತ್ತರ ಆಫ್ರಿಕಾದ ಈ ದೇಶವೂ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.