ಇಸ್ಲಾಮಾಬಾದ್: ಪಾಕಿಸ್ಥಾನದ ಸುಪ್ರೀಂಕೋರ್ಟ್ ರಚಿಸಿದ ಆಯೋಗವು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಆ ದೇಶದ ಹಿಂದೂ ಧಾರ್ಮಿಕ ಸ್ಥಳಗಳನ್ನು ನಿರ್ಲಕ್ಷ್ಯ ಮಾಡಿದೆ ಎಂದು ತನ್ನ ವರದಿಯಲ್ಲಿ ಬಲವಾಗಿ ಆರೋಪಿಸಿದೆ.
ಸುಪ್ರೀಂಕೋರ್ಟ್ ಹಿಂದೂ ದೇಗುಲಗಳ ಸ್ಥಿತಿಗತಿ ಬಗ್ಗೆ ವರದಿ ನೀಡಲು ಡಾ. ಶೋಯೆಬ್ ಸುಡ್ಲ್ ಅವರನ್ನೊಳಗೊಂಡ ಏಕ ವ್ಯಕ್ತಿ ಆಯೋಗವನ್ನು ಸ್ಥಾಪಿಸಿದೆ. ಇದರಲ್ಲಿ 3 ಬೆಂಬಲಿತ ಸದಸ್ಯರಾದ ಡಾ. ರಮೇಶ್ ವಾಂಕ್ವಾನಿ, ಸಾಕಿಬ್ ಜಿಲಾನಿ ಮತ್ತು ಪಾಕಿಸ್ಥಾನದ ಅಟಾರ್ನಿ ಜನರಲ್ ಇದ್ದಾರೆ.
ಹಿಂದೂ ಧಾರ್ಮಿಕ ತಾಣಗಳು ಅವಸಾನದ ಸ್ಥಿತಿಯಲ್ಲಿವೆ ಆಯೋಗ ಫೆಬ್ರವರಿ 5 ರಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಇಂದಿನ ಪಾಕಿಸ್ಥಾನದಲ್ಲಿನ ಹಿಂದೂ ಸಮುದಾಯದ ಅತ್ಯಂತ ಪವಿತ್ರವಾದ ಧಾರ್ಮಿಕ ತಾಣಗಳ ಆತಂಕಕಾರಿ ಚಿತ್ರಣವನ್ನು ಪ್ರದರ್ಶಿಸಿರುವ ಆಯೋಗ, ಈ ಧಾರ್ಮಿಕ ತಾಣಗಳು ಅವಸಾನದ ಸ್ಥಿತಿಯಲ್ಲಿವೆ ಎಂದು ಕಳವಳಕಾರಿಯಾದ ವರದಿಯನ್ನು ನೀಡಿದೆ. ಈ ಆಯೋಗವು ಪಾಕಿಸ್ಥಾನದ ಅನೇಕ ದೇವಸ್ಥಾನಗಳನ್ನು ಸಂದರ್ಶಿಸಿ ಈ ವರದಿಯನ್ನು ತಯಾರಿಸಿದೆ.
2021ರ ಜನವರಿ 6ಮತ್ತು ಜನವರಿ 7 ರಂದು ಕಟಾಸ್ ರಾಜ್ ದೇವಾಲಯಗಳು, ಚಕ್ವಾಲ್ ಮತ್ತು ಪ್ರಹ್ಲಾದ್ ಮಂದಿರ, ಮುಲ್ತಾನ್ಗೆ ಈ ಆಯೋಗ ಭೇಟಿ ನೀಡಿದೆ ಮತ್ತು ಅಲ್ಲಿನ ಧಾರ್ಮಿಕ ಪ್ರದೇಶಗಳು ಅತೀ ನಿರ್ಲಕ್ಷ್ಯದಿಂದ ಕೂಡಿವೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಟೆರಿ ಮಂದಿರ, ಕರಕ್, ಕಟಾಸ್ ರಾಜ್ ದೇವಾಲಯಗಳು ಮತ್ತು ಲಾಸ್ಬೆಲಾದ ಹಿಂಗ್ಲಾಜ್ ಮಂದಿರವನ್ನು ನವೀಕರಿಸಲು ಪ್ರಯತ್ನ ಪಡುವಂತೆ ವರದಿಯು ಸಲಹೆ ನೀಡಿದೆ.
ವರದಿಯು, ಪಾಕಿಸ್ಥಾನದ 365 ಹಿಂದೂ ದೇವಾಲಯಗಳಲ್ಲಿ ಕೇವಲ 13 (3.6%) ಮಾತ್ರ ಇಟಿಪಿಬಿ ಮಂಡಳಿಯಿಂದ ನಿರ್ವಹಿಸಲ್ಪಡುತ್ತಿದೆ ಇನ್ನುಳಿದ 65 (17.8%) ದೇವಾಲಯವನ್ನು ಹಿಂದೂ ಸಮುದಾಯಕ್ಕೆ ನೋಡಿಕೊಳ್ಳುತ್ತಿದೆ. ಮತ್ತೆ ಉಳಿದ 287 (78.6%) ದೇವಾಲಯಗಳನ್ನು ಭೂ ಮಾಫಿಯಾಗಳಿಗೆ ಕೊಡಲಾಗಿದೆ ಎಂದು ತಿಳಿಸಿದೆ.
ಇಲ್ಲಿನ ಗುರುದ್ವಾರಗಳ ಪರಿಸ್ಥಿತಿಗಳು ಹಿಂದೂ ದೇವಸ್ಥಾನಗಳಿಗಿಂತ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ ಎಂದು ವರದಿ ಹೇಳಿದೆ. ಆಯೋಗವು ತನ್ನ ಸಿಬ್ಬಂದಿಯೊಂದಿಗೆ ಪಾಕಿಸ್ಥಾನದ ದೇವಸ್ಥಾನಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಲಿದೆ. ಈ ಬಗ್ಗೆ ಅಲ್ಲಿನ ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿಗೆ ಬರುವ ಗುರುದ್ವಾರ, ದೇವಸ್ಥಾನಗಳ ಮತ್ತು ಇತರ ಧಾರ್ಮಿಕ ಸ್ಥಳಗಳ ವಿವರವಾದ ವರದಿ ತಯಾರಿಸಿ ಸಲ್ಲಿಸುವಂತೆ ಇಟಿಪಿಬಿಗೆ ನಿರ್ದೇಶನ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.