ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆ ಅರಣ್ಯ ಇಲಾಖೆಯು ರಾಮಾಯಣದಲ್ಲಿ ಉಲ್ಲೇಖಿಸಿರುವ ಸಸ್ಯ ಪ್ರಭೇದಗಳನ್ನು ಗುರುತಿಸಿದ್ದು, ಅವುಗಳನ್ನು ಮುಂಬರುವ ರಾಮ ಮಂದಿರ ಆವರಣದಲ್ಲಿ ಬೆಳೆಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ಅನುಮೋದನೆ ಪಡೆದಿದೆ ಎಂದು ಮೂಲಗಳು ವರದಿ ಮಾಡಿದೆ.
ತ್ರೇತಾ ಯುಗದ ಪರಿಸರ ಮತ್ತು ವಾತಾವರಣವನ್ನು ಸೃಷ್ಟಿಸುವ ಸಲುವಾಗಿ ಈ ಗಿಡಗಳನ್ನು ಬೆಳೆಸಲು ಸೂಕ್ತವಾದ ಪ್ರದೇಶಗಳು ಮತ್ತು ಸ್ಥಳಗಳನ್ನು ಗುರುತಿಸಲಾಗುತ್ತದೆ.
ರಕ್ತ ಚಂದನ, ಚಂದನ, ಸಾಲ್, ದೇವದಾರ್, ಧಾಕ್, ಅಶ್ವಥ, ನಾಗ್ಕೇಸರ್, ಮಾವು, ಅಶೋಕ, ಸೀತಾ ಅಶೋಕ, ಪರಿಜಾತ, ಅಗರ್, ಲೋಧ ಸೇರಿದಂತೆ 89 ಜಾತಿಯ ಮರಗಳನ್ನು ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಪ್ರಭೇದಗಳನ್ನು ಪೊದೆಗಳು ಅಥವಾ ಮಧ್ಯಮ-ಎತ್ತರದ ಜಾತಿಗಳಾಗಿ ಅಭಿವೃದ್ಧಿಪಡಿಸಬಹುದು. ಇದಲ್ಲದೆ, ಭಗವಾನ ರಾಮ ಮತ್ತು ಸೀತಾರನ್ನು ಒಳಗೊಂಡ ಮಹಾಕಾವ್ಯದಲ್ಲಿ ಈ ಮರಗಳು ಅವಿಭಾಜ್ಯ ಪಾತ್ರವನ್ನು ವಹಿಸಿವೆ. ಆದರೆ, ಅರಣ್ಯ ಇಲಾಖೆ ಈ ಜಾತಿ ಮರಗಳನ್ನು ತನ್ನ ವಾರ್ಷಿಕ ಗಿಡ ನೆಡುವ ಅಭಿಯಾನದ ವೇಳೆ ನೆಡುವುದಿಲ್ಲ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಈ ರೀತಿಯ ಕೆಲವು ಸಸ್ಯಗಳನ್ನು ವಿವಿಧ ರಾಜ್ಯಗಳಿಂದ ತರುವ ಯೋಜನೆಗಳಿವೆ, ಆದರೆ ಈ ಮರಗಳನ್ನು ನೆಡಲು ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಳವನ್ನು ಅರಣ್ಯ ಇಲಾಖೆಗೆ ಸೂಚಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.