ನವದೆಹಲಿ: ವಲಸೆ ಕಾರ್ಮಿಕರಿಗೆ ಸಮಯೋಚಿತವಾದ ನೆರವನ್ನು ನೀಡಿದ ರಾಷ್ಟ್ರೀಯ ಸೇವಾ ಭಾರತಿ ಭಾರತದ ಅತ್ಯುತ್ತಮ ಎನ್ಜಿಒ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಕೊರೋನಾ ಯೋಧರ ಕಾರ್ಯವನ್ನು ಗೌರವಿಸಿ ಪುರಸ್ಕರಿಸುವ ಸಲುವಾಗಿ ರಚಿಸಲಾದ ಪ್ರಶಸ್ತಿಗೆ ಸೇವಾಭಾರತಿ ಪಾತ್ರವಾಗಿದೆ.
ಗಾಂಧಿ ಜಯಂತಿಯಂದು ಕೊರೋನಾ ಯೋಧರನ್ನು ಗೌರವಿಸುವ ಸಲುವಾಗಿ ಪ್ರಧಾನಿ ಸಲಾದ ‘ಹೆಲ್ತ್ಗಿರಿ ಅವಾರ್ಡ್ 2020’ಗೆ ಸೇವಾಭಾರತಿ ಪಾತ್ರವಾಗಿದೆ. ಪ್ರತಿವರ್ಷ ಗಾಂಧಿ ಜಯಂತಿಯಂದು ನೀಡಲಾಗುವ ಸಫೈಗಿರಿ ಅವಾರ್ಡ್ನ ಮತ್ತೊಂದು ಇದಾಗಿದೆ.
ಪ್ರಶಸ್ತಿಯನ್ನು ಪ್ರದಾನಿಸುತ್ತಿರುವ ಇಂಡಿಯಾ ಟುಡೇ ಗ್ರೂಪ್ಗೆ ಪತ್ರವನ್ನು ಬರೆದಿರುವ ಪ್ರಧಾನಿ ನರೇಂದ್ರ ಮೋದಿಯವರು, ಗಾಂಧಿ ಜಯಂತಿಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸುತ್ತಿರುವುದು ಹೆಚ್ಚು ಸೂಕ್ತವಾಗಿದೆ ಎಂದು ಹೇಳಿದ್ದಾರೆ.
“ಬಾಪು ಅವರ ನಿಸ್ವಾರ್ಥ ಸೇವೆಯ ಆದರ್ಶಗಳು ನಮ್ಮ ಆರೋಗ್ಯ ಕಾರ್ಯಕರ್ತರ ದಣಿವರಿವಿಲ್ಲದೆ ರಾಷ್ಟ್ರ ಸೇವೆ ಸಲ್ಲಿಸುತ್ತಿರುವ ರೀತಿಯಲ್ಲಿ ಪ್ರತಿಫಲಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.
ಇಂಡಿಯಾ ಟುಡೆ “ಹೆಲ್ತ್ಗಿರಿ ಪ್ರಶಸ್ತಿ” ಸಮಾರಂಭವು ನಮ್ಮ ಕರೋನಾ ವಾರಿಯರ್ಸ್ನಿಂದ ಸ್ಫೂರ್ತಿ ಪಡೆಯಲು ಮತ್ತು ಸುರಕ್ಷಿತವಾಗಿರಲು ಮತ್ತು ಜೀವಗಳನ್ನು ಉಳಿಸುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು ಪ್ರೋತ್ಸಾಹಿಸಲಿ. ಈ ಸಂದರ್ಭದಲ್ಲಿ ಎಲ್ಲಾ ಪ್ರಶಸ್ತಿ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು ಇಂಡಿಯಾ ಟುಡೆ ಗ್ರೂಪ್ಗೆ ಶುಕ್ರವಾರ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.