ನವದೆಹಲಿ: ದೆಹಲಿಯ ಗಲಭೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿನ ಆರೋಪಿಗಳ ಬಹಿರಂಗ ಹೇಳಿಕೆಯಲ್ಲಿ ಖಲಿಸ್ಥಾನ್ ಚಳುವಳಿ, ಸಿಖ್ ಪ್ರತ್ಯೇಕತಾವಾದಿ ಚಳುವಳಿ ಮತ್ತು ಪಾಕಿಸ್ಥಾನ ಗುಪ್ತಚರ ಸಂಸ್ಥೆ ಐಎಸ್ಐನ ಮೂವರು ಬೆಂಬಲಿಗರ ಹೆಸರುಗಳು ಇದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 25 ರಂದು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ಆರೋಪದಡಿ ಬಂಧಿತನಾದ ಆರೋಪಿ ಅಥರ್ ಖಾನ್ ನೀಡಿದ ಹೇಳಿಕೆಯಲ್ಲಿ ಪಾಕಿಸ್ಥಾನ ಐಎಸ್ಐ ಮತ್ತು ಖಲಿಸ್ಥಾನ್ ಚಳವಳಿ ಬೆಂಬಲಿಗರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ ಎಂದು ಹೇಳಲಾಗಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಪ್ರಕಾರ, ಪೊಲೀಸ್ ಅಧಿಕಾರಿಗಳು ದಾಖಲಿಸಿದ ಆರೋಪಿಗಳ ಇಂತಹ ತಪ್ಪೊಪ್ಪಿಗೆಗಳನ್ನು ಸಾಕ್ಷಿಯಾಗಿ ಒಪ್ಪಲಾಗುವುದಿಲ್ಲ. ಈ ಹೇಳಿಕೆಗಳನ್ನು ವಿರೋಧಾಭಾಸಗಳನ್ನು ಸಾಬೀತುಪಡಿಸಲು ಮಾತ್ರ ಬಳಸಬಹುದು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧವೂ ಬಳಸಲಾಗುವುದಿಲ್ಲ.
25 ವರ್ಷದ ಆರೋಪಿಯೊಬ್ಬ, ತನ್ನ ಸ್ನೇಹಿತ ರಿಜ್ವಾನ್ ಸಿದ್ದಿಕಿಯು ಖಲಿಸ್ತಾನ್ ಚಳುವಳಿ ಬೆಂಬಲಿಗರಾದ ಬಾಗೀಚಾ ಸಿಂಗ್ ಮತ್ತು ಲವ್ಪ್ರೀತ್ ಸಿಂಗ್ ಅವರನ್ನು ಶಾಹೀನ್ ಬಾಗ್ ಪ್ರತಿಭಟನಾ ಸ್ಥಳದಲ್ಲಿ ಭೇಟಿಯಾಗಿರುವುದಾಗಿ ತನ್ನ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲದೇ ಬಗೀಚಾ ಸಿಂಗ್ ಮತ್ತು ಲವ್ಪ್ರೀತ್ ಸಿಂಗ್ ಅವರು ಪಾಕಿಸ್ತಾನದ ಐಎಸ್ಐ ಬೆಂಬಲವನ್ನು ಹೊಂದಿದ್ದಾರೆ ಮತ್ತು ಖಲಿಸ್ತಾನ್ ಬೆಂಬಲಿಗರು ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯನ್ನು ಬೆಂಬಲಿಸಬೇಕು, ಸರ್ಕಾರದ ವಿರುದ್ಧದ ಹೋರಾಟದಲ್ಲಿ ಜನರಿಗೆ ಸಹಾಯ ಮಾಡಬೇಕು ಎಂದು ಸಂದೇಶ ಕಳುಹಿಸಲಾಗಿತ್ತು ಎಂದು ಆತ ನನ್ನ ಬಳಿ ಹೇಳಿಕೊಂಡಿದ್ದಾನೆ” ಎಂದಿದ್ದಾನೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.