ನವದೆಹಲಿ: ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಪಂಡಿತ್ ಜಸ್ರಾಜ್ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
1930ರಲ್ಲಿ ಹರಿಯಾಣದಲ್ಲಿ ಜನಿಸಿದ ಅವರ ಸಂಗೀತ ವೃತ್ತಿಜೀವನವು ಸುದೀರ್ಘ 8 ದಶಕಗಳವರೆಗೆ ವ್ಯಾಪಿಸಿದೆ. 2000 ನೇ ಇಸವಿಯಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಲಾಯಿತು.
80 ವರ್ಷಗಳ ಕಾಲ ಸಂಗೀತ ವೃತ್ತಿಜೀವನ ನಡೆಸಿದ್ದ ಅವರಿಗೆ ಪದ್ಮಶ್ರೀ(1975 ), ಪದ್ಮಭೂಷಣ(1990 ) ಹಾಗೂ ಪದ್ಮವಿಭೂಷಣ(2000 ), ಸಂಗೀತ ನಾಟಕ ಅಕಾಡೆಮಿಪ್ರಶಸ್ತಿ (1987), 1997-98ರಲ್ಲಿ ಕಾಳಿದಾಸ ಸಮ್ಮಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿದ್ದವು.
ಭಾರತದಲ್ಲಿ ಕೊರೋನವೈರಸ್ ಲಾಕ್ಡೌನ್ ಜಾರಿಯಲ್ಲಿದ್ದಾಗ ಅವರು ಅಮೆರಿಕದಲ್ಲಿದ್ದರು. ಹೀಗಾಗಿ ಅವರು ಅಲ್ಲೇ ಇರುವ ನಿರ್ಧಾರ ಕೈಗೊಂಡರು ಇಂದು ಕುಟುಂಬವರ್ಗ ಹೇಳಿದೆ. ಮೇವತಿ ಘರಾನಾ ಸಂಗೀತ ಪರಂಪರೆಗೆ ಅವರು ಸೇರಿದವರಾಗಿದ್ದಾರೆ.
“ಯುಎಸ್ಎ ನ್ಯೂಜೆರ್ಸಿಯಲ್ಲಿನ ಅವರ ಮನೆಯಲ್ಲಿ ಹೃದಯ ಸ್ತಂಭನದಿಂದಾಗಿ ಅವರು ಇಂದು ಬೆಳಿಗ್ಗೆ 5.15ರ ಸುಮಾರಿಗೆ ಇಹಲೋಕ ತ್ಯಜಿಸಿದರು” ಎಂದು ಅವರ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಭಗವಾನ್ ಕೃಷ್ಣನು ಸ್ವರ್ಗದ ಬಾಗಿಲುಗಳ ಮೂಲಕ ಅವರನ್ನು ಪ್ರೀತಿಯಿಂದ ಸ್ವಾಗತಿಸಲಿ, ಅಲ್ಲಿ ಪಂಡಿತ್ ಜಿ ಈಗ ಓಂ ನಮೋ ಭಗವತೆ ವಾಸುದೇವಾಯ ಎಂದು ತನ್ನ ಪ್ರೀತಿಯ ಭಗವಂತನಿಗಾಗಿ ಮಾತ್ರ ಹಾಡುತ್ತಾರೆ. ಅವರ ಆತ್ಮವು ಶಾಶ್ವತ ಸಂಗೀತ ಶಾಂತಿಯಲ್ಲಿ ನೆಲೆಗೊಳ್ಳಬೇಕೆಂದು ನಾವು ಪ್ರಾರ್ಥಿಸುತ್ತೇವೆ. ನಿಮ್ಮ ಸಾಂತ್ವನ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು “ಎಂದು ಹೇಳಿಯಲ್ಲಿ ತಿಳಿಸಲಾಗಿದೆ
ಪಂಡಿತ್ ಜಿ ಅವರ ಸಾವು ದೇಶದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.
The unfortunate demise of Pandit Jasraj Ji leaves a deep void in the Indian cultural sphere. Not only were his renditions outstanding, he also made a mark as an exceptional mentor to several other vocalists. Condolences to his family and admirers worldwide. Om Shanti. pic.twitter.com/6bIgIoTOYB
— Narendra Modi (@narendramodi) August 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.