ಪುತ್ತೂರು: ಸೈನ್ಯಕ್ಕೆ ಸೇರುವ ತನ್ನ ಮನದಿಂಗಿತವನ್ನು ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಬರೆದು ತಿಳಿಸಿದ್ದಾಳೆ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 7 ನೇ ತರಗತಿಯ ಹುಡುಗಿ ಸಹನಾ. ಈ ಪತ್ರಕ್ಕೆ ಮೋದಿ ಕಛೇರಿಯಿಂದ ಪ್ರತ್ಯುತ್ತರವೂ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಮಿತ್ತೂರು ಎಂಬ ಸಣ್ಣ ಹಳ್ಳಿಯಲ್ಲಿರುವ ಸಹನಾ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾಳೆ. ಈ ಪತ್ರದಲ್ಲಿ ಮೋದಿ ಅವರ ಕ್ಷೇಮ ಸಮಾಚಾರವನ್ನು ಪ್ರಸ್ತಾಪಿಸಿರುವ ಬಾಲಕಿ, ಬಳಿಕ ದೇಶದ ವೀರ ಯೋಧರಿಗೆ ತನ್ನ ನಮನಗಳನ್ನು ತಿಳಿಸುವಂತೆಯೂ ಕೋರಿಕೊಂಡಿದ್ದಾಳೆ. ತಾನೀಗ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭವಿತವ್ಯದಲ್ಲಿ ತಾನೂ ಸೇನೆಗೆ ಸೇರಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಸಹನಾ ವ್ಯಕ್ತಪಡಿಸಿದ್ದಾಳೆ.
ನಮ್ಮ ದೇಶಕ್ಕೆ ಪಾಕಿಸ್ತಾನ ಮತ್ತು ಚೀನಾ ಶತ್ರುಗಳಿದ್ದಂತೆ. ಅಲ್ಲಿನ ಯಾವುದೇ ವಸ್ತುಗಳ ಬಳಕೆ ಭಾರತದಲ್ಲಿ ಬೇಡವೇ ಬೇಡ ಎಂದು ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾಳೆ. ಇಡೀ ಭಾರತ ದೇಶವೇ ಸಂಸ್ಕೃತಿಯ ಪ್ರತೀಕವಾಗಿದ್ದು, ಅಂತಹ ಪರಂಪರೆಯ ಭವ್ಯ ದೇಶಕ್ಕೆ ತನ್ನ ಪ್ರಣಾಮಗಳನ್ನು ತಿಳಿಸಿದ್ದಾಳೆ. ಜೊತೆಗೆ ದೇಶವನ್ನು ಅಪಾಯಗಳಿಂದ ರಕ್ಷಣೆ ಮಾಡುತ್ತಿರುವ ಯೋಧರಿಗೂ ತನ್ನ ನಮನಗಳನ್ನು ತಿಳಿಸಬೇಕು ಎಂದು ಮೋದಿ ಅವರ ಬಳಿ ಭಿನ್ನವಿಸಿಕೊಂಡಿದ್ದಾಳೆ.
ಸಹನಾಳ ಪತ್ರಕ್ಕೆ ಮೋದಿ ಅವರು ತಮ್ಮ ಹಸ್ತಾಕ್ಷರ ಇರುವ ಪ್ರತಿಕ್ರಿಯಾ ಪತ್ರವನ್ನೂ ಕಳುಹಿಸಿದ್ದು, ಅವಳ ಭವಿಷ್ಯಕ್ಕೆ ಶುಭಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.