ಪೆರ್ಲ : ಹಿರಿಯ ಸ್ವಯಂಸೇವಕ ಟಿ. ಆರ್. ಕೆ. ಭಟ್ ಪೆರ್ಲ ಅವರ ಯೋಗ ಕ್ಷೇಮ ವಿಚಾರಿಸಿದ ಪ್ರಧಾನಮಂತ್ರಿ ನರೇಂದ್ರ ಇಂದು (ಎಪ್ರಿಲ್ 23 ಗುರುವಾರ) ಬೆಳಗ್ಗೆ ಪೋನ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಟಿ.ಆರ್.ಕೆ. ಭಟ್ ಅವರೊಂದಿಗೆ ಐದು ನಿಮಿಷಗಳ ಕಾಲ ಮಾತನಾಡಿದರು. ಎಣ್ಮಕಜೆ ಪಂಚಾಯತು ಅಧ್ಯಕ್ಷ, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ, ಬಿಜೆಪಿಯ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ, ರಾಜ್ಯ ಸಮಿತಿ ಪದಾಧಿಕಾರಿಯಾಗಿದ್ದ ಟಿ.ಆರ್.ಕೆ.ಯವರು ಇದೀಗ ವಿಶ್ರಾಂತಿ ಜೀವನ ನಡೆಸುತ್ತಿದ್ದು, ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ನರೇಂದ್ರಮೋದಿ ಅವರ ಜತೆ ಮಾತನಾಡಿದ ಕ್ಷಣ ಅವಿಸ್ಮರರಣೀಯ ಎಂದು ಟಿ.ಆರ್.ಕೆ ಅವರು ಹೇಳುತ್ತಾರೆ
ಮೋದಿ – ಹಲ್ಲೋ TRK Bhat ಜಿ ಅಲ್ವೋ.
TRK – ಹವ್ದು ಯಾರು ನೀವು
ಮೋದಿ- ನಾನು ನರೇಂದ್ರ ಮೋದಿ
TRK- ತುಂಬಾ ಕುಶಿ ಅಯ್ತು ನಿಮ್ಮಂತಹವರು ನಮ್ಮಂತಹ ಸಾಮಾನ್ಯರಿಗೆ ಕರೆದು ಮಾತನಾಡಿದ್ದು
ಮೋದಿ – ಹೇಗಿದ್ದೀರಿ ಆರೋಗ್ಯವೇ ನಿಮ್ಮ ಸಮಾಜ ಸೇವೆ ಹೇಗಿದೆ
TRK- ನನಿಗೆ ಈಗ ವಯಸ್ಸು 93 ಸಮಾಜ ಸೇವೆ ಮಾಡಲು ಆರೋಗ್ಯ ಸಾಲದು
ಮೋದಿ – ನೀವು ಮೊದಲು ಮಾಡಿದ್ದಿರಲ್ಲಾ ಅದುವೇ ಇವತ್ತು ಈ ಹಂತಕ್ಕೆ ಬಂದದ್ದು
TRK- ನಾನು ಮಾಡದಿದ್ದರೂ ನನ್ನ ಮಗ ಪ್ರಸಾದ್ ಈಗ ಸಮಾಜ ಸೇವೆ ಮಾಡುತ್ತಿದ್ದಾನೆ
ಮೋದಿ – ಒಳ್ಳೇದು ಮಾಡಲೇ ಬೇಕಲ್ಲ ನಿಮ್ಮಂತಹಾ ಹಿರಿಯರು ಮಾಡಿದ ಕೆಲಸ ಇವತ್ತು ದೇಶದಲ್ಲಿ ಕಾಣುತ್ತಾ ಇದೆ ಅಲ್ಲವೇ
TRK – ನಿಮ್ಮ ಕೆಲಸ ಅದ್ಬುತ ಅಷ್ಟೂ ಒಳ್ಳೆ ಕೆಲಸ ಮಾಡುತ್ತಾ ಇದ್ದೀರಿ ನನಿಗೆ ಅದನ್ನು ನೋಡುವ ಕೇಳುವ ಭಾಗ್ಯ ಸಿಕ್ಕಿತು ಇನ್ನೂ ಮುಂದೆಯೂ ನಿಮಗೆ ದೇಶ ಸೇವೆ ಮಾಡುವ ಆಯುಷ್ಯ ಆರೋಗ್ಯ ದೇವರು ನೀಡಲಿ
ಮೋದಿ – ನಿಮ್ಮ ಆಶೀರ್ವಾದ ಧನ್ಯವಾದಗಳು ಒಳ್ಳೆಯದಾಗಲಿ
ಈ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಹಿರಿಯ ವ್ಯಕ್ತಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅವರ ಯೋಗ ಕ್ಷೇಮ ವಿಚಾರಿಸುತ್ತಿದ್ದಾರೆ. ಹೀಗೆಯೇ ಕರ್ನಾಟಕದ ಪುತ್ತೂರಿನ ಮಾಜಿ ಶಾಸಕರು, ಹಿರಿಯರಾದ ಶ್ರೀ ರಾಮ್ ಭಟ್, ಶಿವಮೊಗ್ಗದ ಡಿ.ಎಚ್ ಶಂಕರಮೂರ್ತಿ ಅವರಿಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾತನಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.