ನವದೆಹಲಿ: ಭಾರತ ತನ್ನ ಪರಮಾಣು ದಾಳಿ ಸಾಮರ್ಥ್ಯದ ಅಭಿವೃದ್ಧಿ ಮತ್ತು ಬಲಪಡಿಸುವಿಕೆ ಪ್ರಕ್ರಿಯೆಯ ಭಾಗವಾಗಿ 3,500 ಕಿಲೋಮೀಟರ್ ವ್ಯಾಪ್ತಿಯ ಕೆ -4 ಶೌರ್ಯ ಸಬ್ಮರೀನ್ ಲಾಂಚ್ಡ್ ಬ್ಯಾಲಿಸ್ಟಿಕ್ ಮಿಸೈಲ್ ಅನ್ನು ಶುಕ್ರವಾರ ಪರೀಕ್ಷೆಗೊಳಪಡಿಸಲಿದೆ. ಕೆ -4 ಶೌರ್ಯ ಕ್ಷಿಪಣಿಯು ಪರಮಾಣು ತುದಿಯನ್ನು ಹೊಂದಿರಲಿದೆ ಮತ್ತು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿಯ ಅಂಗವಾಗಲಿದೆ. ಇದನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿಯ ನೀರೊಳಗಿನ ವೇದಿಕೆಯಿಂದ ಪರೀಕ್ಷಿಸಲಾಗುತ್ತದೆ.
ಇದು ಮಧ್ಯಂತರ ಶ್ರೇಣಿಯ ಪರಮಾಣು ಕ್ಷಿಪಣಿಯಾಗಿದ್ದು, ಭಾರತದ ಎರಡನೇ-ಸ್ಟ್ರೈಕ್ ಸಾಮರ್ಥ್ಯಕ್ಕೆ ಹೆಚ್ಚು ಅಗತ್ಯವಿರುವ ಬಲವನ್ನು ನೀಡಲಿದೆ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಅರಿಹಂತ್ ಕ್ಲಾಸ್ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಶಸ್ತ್ರಸಜ್ಜಿತಗೊಳಿಸುತ್ತದೆ. ಡಿಆರ್ಡಿಒ ಅರಿಹಂತ್ ಕ್ಲಾಸ್ ಜಲಾಂತರ್ಗಾಮಿ ನೌಕೆಗಳಿಗಾಗಿ ಕೆ -4 ಶೌರ್ಯ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ, ಇದು ಭಾರತದ ಪರಮಾಣು ಕಾರ್ಯದ ಮೂರನೇ ಮತ್ತು ಅತ್ಯಂತ ನಿರ್ಣಾಯಕ ಹಂತವಾಗಿದೆ.
ಡಿಆರ್ಡಿಒ ಮೂಲಗಳ ಪ್ರಕಾರ, ಕೆ -4 ಶೌರ್ಯ ಕ್ಷಿಪಣಿಯ ಹಲವಾರು ಸುಧಾರಿತ ವ್ಯವಸ್ಥೆಗಳನ್ನು ಮೌಲ್ಯೀಕರಿಸಲು ಟೆಸ್ಟ್ ಫೈರಿಂಗ್ ಅನ್ನು ನಡೆಸಲಾಗುತ್ತಿದೆ. ಕೆ -4 ಶೌರ್ಯದ ಎಲ್ಲಾ ವ್ಯವಸ್ಥೆಗಳನ್ನು ಒಮ್ಮೆ ಪರೀಕ್ಷಿಸಿದ ನಂತರ, ಕ್ಷಿಪಣಿಯನ್ನು ಕಾರ್ಯಗತಗೊಳಿಸುವ ಮೊದಲು ಭಾರತೀಯ ನೌಕಾಪಡೆಯ ಸಕ್ರಿಯ ಜಲಾಂತರ್ಗಾಮಿ ನೌಕೆಯಿಂದ ಪರೀಕ್ಷಿಸಲಾಗುತ್ತದೆ.
ಕ್ಷಿಪಣಿ ಪರೀಕ್ಷೆಗಾಗಿ ಭಾರತವು NOTAM (Notice to Airmen) ಮತ್ತು ಸಮುದ್ರ ಎಚ್ಚರಿಕೆಗಳನ್ನು ನೀಡಿದೆ. ಮುಂಬರುವ ವಾರಗಳಲ್ಲಿ ಅಗ್ನಿ -3 ಮತ್ತು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಟೆಸ್ಟ್ ಫಯರ್ ನಡೆಸುವ ಅಂತಿಮ ಪ್ರಕ್ರಿಯೆಯಲ್ಲಿದೆ ಡಿಆರ್ಡಿಒ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.