ನವದೆಹಲಿ: ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ (ಇಸಿಸ್)ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ವಾಸಿಸುತ್ತಿರುವ ಯಹೂದಿ ಮತ್ತು ಇಸ್ರೇಲಿ ಸಮುದಾಯಗಳನ್ನು ಗುರಿಯಾಗಿಸಿ ದಾಳಿಯನ್ನು ನಡೆಸಲು ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿರುವ ಆನ್ಲೈನ್ ಸಂದೇಶಗಳಿಂದ, ದೇಶದಲ್ಲಿ ವಾಸಿಸುತ್ತಿರುವ ಯಹೂದಿಗಳು ಮತ್ತು ಇಸ್ರೇಲಿಗಳನ್ನು ಗುರಿಯಾಗಿಸಲು ಎರಡು ಭಯೋತ್ಪಾದಕ ಸಂಘಟನೆಗಳು ತಮ್ಮ ಸದಸ್ಯರಿಗೆ ನಿರ್ದೇಶನ ನೀಡಿವೆ ಎಂದು ತಿಳಿದುಬಂದಿದೆ.
ಕೇರಳ ಮೂಲದ ಜಿಹಾದಿ ಸಂಘಟನೆಯು ಇತ್ತೀಚೆಗೆ ಕೊಚ್ಚಿಯಲ್ಲಿನ ಯಹೂದಿಗಳ ಸ್ಥಳಗಳ ಮೇಲೆ ಕಣ್ಗಾವಲನ್ನು ಇರಿಸಿತ್ತು.
ವರದಿಗಳ ಪ್ರಕಾರ, ಜನಪ್ರಿಯ ಸ್ಥಳಗಳಾದ ಫ್ರೀಮಾಸನ್ ಟೆಂಪಲ್, ಸರ್ವೊಥಮಾಮ್ ಮೇಸೋನಿಕ್ ಟೆಂಪಲ್ ಮತ್ತು ಕೇರಳದ ಕೊಚ್ಚಿಯ ಕೋಡರ್ ಹಾಲ್ ಜಿಹಾದಿಗಳ ವಕ್ರ ದೃಷ್ಟಿಗೆ ಗುರಿಯಾಗಿ, ತೀವ್ರ ಬೆದರಿಕೆಯನ್ನು ಎದುರಿಸುತ್ತಿವೆ.
ಅಲ್ ಖೈದಾ ಮತ್ತು ಐಸಿಸ್ ಪ್ರೇರಿತ ಜಿಹಾದಿ ಗುಂಪುಗಳು ಭಾರತಕ್ಕೆ ಪ್ರಯಾಣಿಸುವ ಇಸ್ರೇಲಿ ಪ್ರವಾಸಿಗರನ್ನು ಅಪಹರಿಸಬಹುದು ಎಂದು ಗುಪ್ತಚರ ಸಂಸ್ಥೆಗಳು ತಮ್ಮ ಎಚ್ಚರಿಕೆಯಲ್ಲಿ ತಿಳಿಸಿವೆ.
ವರದಿಯ ಹಿನ್ನಲೆಯಲ್ಲಿ, ಈ ಸಮುದಾಯಗಳ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಿಗೆ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.