ಬೆಂಗಳೂರು: ಬಂಡಿಪುರ ಮೀಸಲು ಅರಣ್ಯದಲ್ಲಿ ದಟ್ಟವಾಗಿ ಹಬ್ಬಿರುವ ಬೆಂಕಿಯನ್ನು ನಂದಿಸುವ ಸಲುವಾಗಿ ಭಾರತೀಯ ವಾಯುಸೇನೆಯ ಎರಡು ಹೆಲಿಕಾಫ್ಟರ್ಗಳನ್ನು ನಿಯೋಜನೆಗೊಳಿಸಲಾಗಿದೆ. ಒಂದು ವಾರಗಳಿಂದ ಬೆಂಕಿ ನಿರಂತರವಾಗಿ ಹರಡುತ್ತಲೇ ಇದೆ.
ಫೆ.25ರಿಂದ ವಾಯುಸೇನೆಯ ಹೆಲಿಕಾಫ್ಟರ್ಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ, ಆದರೆ ಮಂದ ಬೆಳಕಿನ ಕಾರಣದಿಂದ ಕಾರ್ಯಾಚರಣೆಯನ್ನು ಮಧ್ಯಾಹ್ನದ ಬಳಿಕ ಸ್ಥಗಿತಗೊಳಿಸಿವೆ. ಫೆ.26ರ ಬೆಳಿಗ್ಗೆ ಕಾರ್ಯಾಚರಣೆ ಮತ್ತೆ ಆರಂಭಗೊಂಡಿತು.
ಮಿ-17 ವಿ5 ಎಂಬ ಎರಡು ಹೆಲಿಕಾಫ್ಟರ್ಗಳು ರಾಜ್ಯ ಸರ್ಕಾರದ ಮನವಿಯ ಮೇರೆಗೆ ಬಂಡಿಪುರದಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಧುಮುಕಿವೆ. ರಾಜ್ಯ ಅಗ್ನಿಶಾಮಕ ಮತ್ತು ಅರಣ್ಯ ಮಂಡಳಿಯೊಂದಿಗೆ ಜಂಟಿ ಕಾರ್ಯಾಚರಣೆಯನ್ನು ನಡೆಸಿ ಬಂಡಿಪುರ ಮತ್ತು ಗೋಪಾಲಸ್ವಾಮಿ ಹಿಲ್ ಫಾರೆಸ್ಟ್ ಏರಿಯಾದಲ್ಲಿ ಬೆಂಕಿ ನಂದಿಸುವ ಕಾರ್ಯವನ್ನು ನಡೆಸುತ್ತಿದೆ.
ನಗು ಡ್ಯಾಂನಿಂದ ಹೆಲಿಕಾಫ್ಟರ್ಗೆ ಅಳವಡಿಸಿದ ಕೇಬಲ್ ಮೂಲಕ ಸಣ್ಣ ವಾಟರ್ ಟ್ಯಾಂಕ್ ’ಬೊಂಬಿ ಬಕೆಟ್ಸ್’ನಲ್ಲಿ ನೀರನ್ನು ತಂದು ಅರಣ್ಯಕ್ಕೆ ಚಿಮುಕಿಸಲಾಗುತ್ತಿದೆ. ಈಗಾಗಲೇ 10 ಬಕೆಟ್ ನೀರನ್ನು ಅಂದರೆ ಸುಮಾರು 30 ಸಾವಿರ ಲೀಟರ್ಗಳಷ್ಟು ನೀರನ್ನು ಈ ಪ್ರದೇಶಕ್ಕೆ ತಂದು ಸುರಿಯಲಾಗಿದೆ.
ಅರಣ್ಯದ ಬೆಂಕಿ ಇನ್ನೂ ಸಂಪೂರ್ಣವಾಗಿ ನಂದಿಲ್ಲ, ಈ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳು ಮುಂದುವರೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.