ನವದೆಹಲಿ: ಕ್ಯಾನ್ಸರ್ ಮಹಾ ಮಾರಿಗೆ ತುತ್ತಾದರೂ ಎದೆಗುಂದದೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ವಿಶ್ವ ಕ್ಯಾನ್ಸರ್ ದಿನವಾದ ಇಂದು ಮಾಡಿರುವ ಟ್ವೀಟ್ ಎಲ್ಲರ ಗಮನವನ್ನೂ ಸೆಳೆದಿದೆ.
‘ಮನಷ್ಯನ ಮನಸ್ಸು ಯಾವುದೇ ಕಾಯಿಲೆಯನ್ನು ಜಯಿಸಬಲ್ಲದು’ ಎಂದು ಅವರಿಂದು ಮಾಡಿರುವ ಟ್ವಿಟ್ಗೆ ಎಲ್ಲರಿಂದಲೂ ಭಾರೀ ಪ್ರತಿಕ್ರಿಯೆಗಳು ಬಂದಿವೆ.
Human mind can overcome any disease. #WorldCancerDay
— Manohar Parrikar (@manoharparrikar) February 4, 2019
ಮೇದೋಜೀರಕ ಕ್ಯಾನ್ಸರ್ನ ಅಡ್ವಾನ್ಸ್ಡ್ ಸ್ಟೇಜ್ನಲ್ಲಿ ಪರಿಕ್ಕರ್ ಇದ್ದಾರೆ. ಎಂತಹವರನ್ನೂ ಖಿನ್ನತೆಗೆ ದೂಡಬಲ್ಲ ಪರಿಸ್ಥಿತಿ ಅದು. ಆದರೂ ಅವರು ಎದೆಗುಂದಿಲ್ಲ, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಕ್ಯಾನ್ಸರ್ಗೆಯೇ ಸೆಡ್ಡು ಹೊಡೆದಿದ್ದಾರೆ.
ಕ್ಯಾನ್ಸರ್ ಪತ್ತೆಯಾದಾಗ ತಾನು ಯಾವುದೇ ಭಯಕ್ಕೆ ಒಳಗಾಗಲಿಲ್ಲ ಎಂದು ಪರಿಕ್ಕರ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಕಾಯಿಲೆಯನ್ನು ಎದುರಿಸುವ ಇಚ್ಛಾಶಕ್ತಿ ಅವರಿಗಿದೆ ಎಂದು ಅವರನ್ನು ಹತ್ತಿರದಲ್ಲಿ ನೋಡಿದ ಸಾಕಷ್ಟು ಮಂದಿ ಹೇಳುತ್ತಾರೆ.
ಇತ್ತೀಚಿಗಷ್ಟೇ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪರಿಕ್ಕರ್ ಅವರು, ಉರಿ ಸಿನಿಮಾದ ಡೈಲಾಗ್ ’ಹೌ ಈಸ್ ದಿ ಜೋಶ್?’ ಎಂದು ಕೇಳಿದ್ದರು. ಇದು ಅವರ ಇಚ್ಛಾಶಕ್ತಿ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.