ನವದೆಹಲಿ: ಮುಸ್ಲಿಂರನ್ನು ಹೊರಗಿಡುವ ಪರಿಕಲ್ಪನೆಯನ್ನು ಹಿಂದೂ ರಾಷ್ಟ್ರ ಹೊಂದಿಲ್ಲ, ಆರ್ಎಸ್ಎಸ್ ಎಂದಿಗೂ ಸಂವಿಧಾನ ಮತ್ತು ನೆಲದ ಕಾನೂನಿನ ವಿರುದ್ಧ ಹೋಗಿಲ್ಲ ಎಂದು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ: ಆರ್ಎಸ್ಎಸ್ ದೃಷ್ಟಿಕೋನ’ ಎಂಬ ಉಪನ್ಯಾಸ ಸರಣಿಯ ಎರಡನೇ ದಿನ ಮಾತನಾಡಿದ ಅವರು, ಆರ್ಎಸ್ಎಸ್ ಅಲ್ಪಸಂಖ್ಯಾತರ ವಿರೋಧಿ ಅಲ್ಲ ಮತ್ತು ಸಂವಿಧಾನವನ್ನು ಬದಲಾಯಿಸುವುದನ್ನು ಅದು ಪ್ರಸ್ತಾಪಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
‘ಹಿಂದೂ ರಾಷ್ಟ್ರದ ಪರಿಕಲ್ಪನೆ ಇತರ ಧರ್ಮದವರನ್ನು ಹೊರಗಿಡುವುದೆಂದಲ್ಲ ಅಥವಾ ಮುಸ್ಲಿಂರಿಗೆ ನಮ್ಮ ನೆಲದಲ್ಲಿ ಜಾಗವಿಲ್ಲ ಎಂದರ್ಥವಲ್ಲ, ಹಾಗೇನಾದರು ಆಗಿದ್ದರೆ ಅದು ಹಿಂದುತ್ವವೇ ಅಲ್ಲ, ಹಿಂದುತ್ವ ಇಡೀ ವಿಶ್ವವೇ ಒಂದು ಕುಟುಂಬ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದೆ’ ಎಂದಿದ್ದಾರೆ.
‘ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿರಬೇಕು ಎಂಬುದನ್ನು ನಾವು ಬಯಸುತ್ತೇವೆ, ಆರ್ಎಸ್ಎಸ್ ಎಂದೂ ಸಂವಿಧಾನದ ವಿರುದ್ಧ ಹೋಗಿಲ್ಲ. ಜಾತ್ಯಾತೀತ, ಸಮಾಜವಾದಿ ಪದಗಳನ್ನು ಬಳಿಕ ಸೇರ್ಪಡೆಗೊಳಿಸಿದ್ದು, ಈಗ ಅದು ಅಲ್ಲಿದೆ’ ಎಂದಿದ್ದಾರೆ.
ಸಂವಿಧಾನವನ್ನು ಭಾರತದ ಮೌಲ್ಯಗಳಿಗೆ ಅನುಸಾರವಾಗಿ ರಚನೆ ಮಾಡಲಾಗಿದೆ, ಆದರೆ ಅದರಲ್ಲಿ ವಿದೇಶದಿಂದ ಎರವಲು ಪಡೆದ ಒಂದಿಷ್ಟು ಕಾನೂನುಗಳಿವೆ, ಅವುಗಳ ಬಗ್ಗೆ ನಾವು ಮರುಚಿಂತನೆ ನಡೆಸಬೇಕಿದೆ ಎಂದಿದ್ದಾರೆ.
Source: Hindustan times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.