ಅಲಹಾಬಾದ್: ಆಹಾರ ಮಾನವನ ಅಸ್ತಿತ್ವಕ್ಕೆ ಅನಿವಾರ್ಯದ ಮೂಲಭೂತ ಅಗತ್ಯ. ಆದರೆ ಭೂಮಿಯಲ್ಲಿನ ಅನೇಕರಿಗೆ ಎರಡು ಹೊತ್ತಿನ ಹೊಟ್ಟೆ ತುಂಬುವಷ್ಟು ಆಹಾರ ಇನ್ನೂ ಮರೀಚಿಕೆ. ಒಂದು ಹೊತ್ತು ತಿಂದರೆ, ಇನ್ನೊಂದು ಹೊತ್ತಿಗೆ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನಮ್ಮ ದೇಶದ ಅನೇಕ ಬಡವರಿದ್ದಾರೆ. ಹಸಿದ ಹೊಟ್ಟೆಯಲ್ಲಿ ಮಲಗುವುದು ಇವರಿಗೆ ಅನಿವಾರ್ಯ.
ಇಂತಹ ಬಡವರಿಗೆಂದೇ ಅಲಹಾಬಾದ್ನ ಸ್ವಸಹಾಯ ಸಂಘವೊಂದು ಅತ್ಯುತ್ತಮ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಅದುವೇ ’ಅನಾಜ್ ಬ್ಯಾಂಕ್’. ಸುನೀತ್ ಸಿಂಗ್ ಎಂಬುವವರ ಕನಸಿನ ಕೂಸು ಈ ಯೋಜನೆ. ಇದರಡಿ ಪ್ರತಿ ಗ್ರಾಮಗಳಲ್ಲೂ 300 ಕೆಜಿ ಅಕ್ಕಿ ತುಂಬುವ ಡ್ರಮ್ನ್ನು ಇಡಲಾಗಿದೆ.
ದಾನಿಗಳು ‘ಅನಾಜ್ ಬ್ಯಾಂಕ್’ನ ಈ ಡ್ರಮ್ಗೆ ಅಕ್ಕಿಯನ್ನು ತಂದು ಹಾಕುತ್ತಾರೆ. ಅಕ್ಕಿಯ ಅಗತ್ಯವಿದ್ದವರು ಇಲ್ಲಿಗೆ ಬಂದು 5 ಕೆಜಿಯಷ್ಟು ಅಕ್ಕಿಯನ್ನು ಸಾಲವಾಗಿ ತೆಗೆದುಕೊಂಡು ಹೋಗಬಹುದು. 15 ದಿನಗಳ ಬಳಿಕ ಅಕ್ಕಿಯನ್ನು ಮರಳಿಸಬೇಕು. ಇದಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. ಕೆಲವರಿಗೆ ಉಚಿತವಾಗಿಯೇ ಅಕ್ಕಿ ನೀಡಲಾಗುತ್ತದೆ.
ಕೈಯಲ್ಲಿ ಅಕ್ಕಿ ಖರೀದಿ ಮಾಡಲು ಹಣವಿಲ್ಲದೆ ಹಸಿದ ಹೊಟ್ಟೆಯಲ್ಲಿ ಯಾರೂ ಮಲಗಬಾರದು ಎಂಬ ಉದ್ದೇಶದೊಂದಿಗೆ ಈ ಬ್ಯಾಂಕ್ ಆರಂಭಗೊಂಡಿದೆ.ಅಲ್ಲದೇ 1 ಕೆಜಿಯಷ್ಟು ಅಕ್ಕಿಯನ್ನು ಇಲ್ಲಿಗೆ ದಾನ ಮಾಡಿ ಬ್ಯಾಂಕ್ನ ಸದಸ್ಯರಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.