ಬೆಂಗಳೂರು : ಪ್ರಣತಿ ಪ್ರತಿಷ್ಠಾನ ಕನ್ನಡ ಕವನ ಸಾಹಿತ್ಯ ಶೀರ್ಷಿಕೆಯಡಿ ರಾಜ್ಯಮಟ್ಟದ ಕಮ್ಮಟವೊಂದನ್ನು ಆಯೋಜಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಆಡಿಷನ್ ಆಯೋಜಿಸಿದೆ. ಪ್ರಣತಿ ಪ್ರತಿಷ್ಠಾನ ತನ್ನ ’ ಮನೆ ಮನಗಳಲ್ಲಿ ಕನ್ನಡದ ದೀಪ ಎಂಬ ಧ್ಯೇಯವಾಕ್ಯಕ್ಕೆ ಬದ್ಧವಾಗಿದ್ದು, ಕನ್ನಡದ ಸಮೃದ್ಧ ಸಾಹಿತ್ಯದೆಡೆ ಬೆಳಕು ಚೆಲ್ಲುತ್ತಾ, ಜನಮಾನಸದಲ್ಲಿ ಸಂಗೀತ ಮತ್ತಿತರ ಕಲೆಗಳಲ್ಲಿ ಸಾಹಿತ್ಯಾಸಕ್ತಿಯನ್ನು ಉತ್ತೇಜಿಸುವಲ್ಲಿ ಸತತವಾಗಿ ಶ್ರಮಿಸುತ್ತಿದೆ.
ಈ ನಿಟ್ಟಿನಲ್ಲಿ ಮುಂಬರುವ ಮೇ ತಿಂಗಳ 11, 12 ಮತ್ತು 13 ರಂದು ಮಂಥನ ಎಂಬ ಮೂರು ದಿನಗಳ ರಾಜ್ಯಮಟ್ಟದ ಕಮ್ಮಟವನ್ನು ಹೆಮ್ಮೆಯಿಂದ ಆಯೋಜಿಸುತ್ತಿದೆ. ಈ ಕಮ್ಮಟವು ಆಸಕ್ತರಿಗೆ ಕನ್ನಡದ ಹೆಸರಾಂತ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ದಿಗ್ಗಜರಿಂದ ಥಿಯರಿ ಮತ್ತು ಪ್ರಾಕ್ಟಿಕಲ್ ಮೂಲಕ ಪರಿಪೂರ್ಣ ತರಬೇತಿ ನೀಡಲಾಗುವುದು.
ಕಮ್ಮಟದ ಕೊನೆಯಲ್ಲಿ ಸುಸಜ್ಜಿತ ಪ್ರತಿಷ್ಠಿತ ಸಭಾಂಗಣದಿಂದ ಪೂರ ಪಕ್ಕವಾದ್ಯಗಳೊಂದಿಗೆ ಶಿಬಿರಾರ್ಥಿಗಳಿಗೆ ಹಾಡಲು ಅವಕಾಶ ನೀಡಲಾಗುವುದು. ಅಷ್ಟೇ ಅಲ್ಲ, ಇದರಲ್ಲಿ ಗುರುತಿಸ್ಪಲ್ಪಡುವ ಕೆಲವು ಒಳ್ಳೆಯ ಪ್ರತಿಭೆಗಳಿಗೆ ಪ್ರಣತಿ ಪ್ರತಿಷ್ಠಾನವು ತನ್ನ ಮುಂಬರುವ ಹಲವಾರು ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿ. ಕಮ್ಮಟ ಮತ್ತು ಗಾಯನ ಧ್ವನಿ ಮುದ್ರಿಕೆ ಹೊರತರುವಲ್ಲಿ ಸೇರಿಸಿಕೊಳ್ಳುತ್ತಾರೆ.
1 ನೇ ಆಡಿಷನ್
ದಿನಾಂಕ: ಭಾನುವಾರ 1 ನೇ ಏಪ್ರಿಲ್ 2018
ಸ್ಥಳ: ಎಸ್ ಎಸ್ ಎಂಆರ್ವಿ ಡಿಗ್ರಿ ಕಾಲೇಜು, ಜಯನಗರ 9ನೇ ಹಂತ, ಬೆಂಗಳೂರು.
2ನೇ ಆಡಿಷನ್
ದಿನಾಂಕ: ಭಾನುವಾರ 15 ಏಪ್ರಿಲ್-2018
ಸ್ಥಳ: ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜು, ಬೆಂಗಳೂರು.
ಆಸಕ್ತರು ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ವಿನಂತಿಸಲಾಗಿದೆ – 9448087875 ಅಥವಾ 9986482425 .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.