ನವದೆಹಲಿ: 2018ರ ಬಜೆಟ್ ಅಧಿವೇಶನದ ಆರಂಭದ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಲೋಕಸಭಾ, ರಾಜ್ಯಸಭಾ ಜಂಟಿ ಸದಸನವನ್ನು ಉದ್ದೇಶಿಸಿ ಮಾತನಾಡಿದರು.
2022ರ ವೇಳೆಗೆ ಸರ್ಕಾರ ದೇಶದ ಪ್ರತಿಯೊಬ್ಬ ವಸತಿಹೀನರಿಗೂ ವಸತಿ ಕಲ್ಪಿಸಲು ಸಮರ್ಥವಾಗಲಿದೆ ಎಂಬ ಭರವಸೆಯನ್ನು ಹೊಂದಿರುವುದಾಗಿ ಕೋವಿಂದ್ ಹೇಳಿದರು.
ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳೊಂದಿಗೆ ವಸತಿಹೀನರಿಗೆ ವಸತಿಯನ್ನು ಒದಗಿಸಲು ಸರ್ಕಾರ 2022ರ ಟಾರ್ಗೆಟ್ ಇಟ್ಟುಕೊಂಡಿರುವುದನ್ನು ಅವರು ಶ್ಲಾಘಿಸಿದರು.
ನರೇಂದ್ರ ಮೋದಿ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡದೆಯೇ ಅವರ ಅಭಿವೃದ್ಧಿಗೆ ಬೇಕಾದ ಎಲ್ಲಾ ಕಾರ್ಯವನ್ನು ಮಾಡಲಿದೆ. ಶೀಘ್ರವೇ ಮುಸ್ಲಿಂ ಮಹಿಳೆಯರ ಸ್ವತಂತ್ರ ಬದುಕಿಗಾಗಿ ತ್ರಿವಳಿ ತಲಾಖ್ನ್ನು ಕಾನೂನುಗೊಳಿಸಲಿದೆ ಎಂದರು.
ಜಿಎಸ್ಟಿ ಪಾರದರ್ಶಕತೆಯನ್ನು ತರಲಿದೆ, ತೆರಿಗೆ ಪದ್ಧತಿಯನ್ನು ಸರಳಗೊಳಿಸಲಿದೆ ಎಂದರು.2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ಒಂದೇ ಬಾರಿಗೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ನಡೆಸಲು ಎಲ್ಲಾ ಪಕ್ಷಗಳು ಚರ್ಚೆ ನಡೆಸಬೇಕು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.