ಇಸ್ಲಾಮಾಬಾದ್: ಬಲೂಚಿಸ್ತಾನ ಹೋರಾಟಗಾರರೊಬ್ಬರು ಪಾಕಿಸ್ಥಾನದ ನಿಜ ಮುಖವನ್ನು ಬಯಲು ಮಾಡಿದ್ದಾರೆ. ಭಾರತೀಯ ಪ್ರಜೆ ಕುಲಭೂಷಣ್ ಅವರನ್ನು ಇರಾನ್ನಿಂದ ಅಪಹರಿಸಿಕೊಂಡು ಪಾಕಿಸ್ಥಾನಕ್ಕೆ ತರಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
ಪಾಕ್ನ ನಟೋರಿಯಸ್ ಗುಪ್ತಚರ ಇಲಾಖೆ ಐಎಸ್ಐ ಉಗ್ರ ಮುಲ್ಲಾ ಉಮರ್ಗೆ ಕೋಟಿಗಟ್ಟಲೆ ಹಣವನ್ನು ನೀಡಿ ಕುಲಭೂಷಣ್ ಯಾದವ್ರನ್ನು ಇರಾನ್ನ ಚಾಬರ್ನಿಂದ ಅಪರಹರಣ ಮಾಡಿಸಿತ್ತು. ಬಳಿಕ ಅವರ ಮೇಲೆ ಬೇಹುಗಾರಿಕೆಯ ಸುಳ್ಳು ಆರೋಪ ಹಾಕಿ ಜೈಲಿಗಟ್ಟಿತು ಎಂದು ಬಲೂಚ್ ಹೋರಾಟಗಾರ ಮಾಮಾ ಖಾದಿರ್ ಹೇಳಿದ್ದಾರೆ.
ಟಿವಿ ಮಾಧ್ಯಮವೊಂದರಲ್ಲಿ ಖಾದಿರ್ ಈ ವಿಷಯವನ್ನು ಹೇಳಿದ್ದು, ಉಗ್ರ ಮುಲ್ಲಾ ಉಮರ್ ಐಎಸ್ಐನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಈತನಿಗೆ ಕುಲಭೂಷಣ್ ಅವರನ್ನು ಅಪಹರಣ ಮಾಡಲು ಐಎಸ್ಐ ಕೋಟಿಗಟ್ಟಲೆ ಹಣ ನೀಡಿದೆ ಎಂದು ಆರೋಪಿಸಿದ್ದಾರೆ.
ಕುಲಭೂಷಣ್ ಅಪಹರಣವನ್ನು ಕಣ್ಣಾರೆ ಕಂಡಿದ್ದ ಹೋರಾಟಗಾರರೊಬ್ಬರು ತನಗೆ ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಖಾದಿರ್ ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.