ಅಹ್ಮದಾಬಾದ್: ಗುಜರಾತ್ನ ಭುಜ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಕಾಂಗ್ರೆಸ್ಗೆ ಟಾಂಗ್ ನೀಡಿ ಮಾತನಾಡಿದ ಅವರು, ‘ಕೆಸರೆರೆಚುತ್ತಿರುವುದಕ್ಕೆ ಧನ್ಯವಾದಗಳು, ಕಮಲ ಅರಳುವುದು ಕೆಸರಲ್ಲೇ’ ಎಂದಿದ್ದಾರೆ.
‘ಜನರೊಂದಿಗೆ ಸಂವಾದಿಸುವುದರಿಂದ ನನಗೆ ವಿವರಣಾತೀತವಾದ ಸಂತೋಷ ಸಿಗುತ್ತದೆ. ಬದುಕಿನ ಪ್ರತಿಕ್ಷಣವೂ ಜನ ಸೇವೆಗೆ ಮೀಸಲು’ ಎಂದಿದ್ದಾರೆ.
‘ನೋಟ್ ಬ್ಯಾನ್ ಬಗ್ಗೆ ಕಾಂಗ್ರೆಸ್ ಅಸಂತುಷ್ಟವಾಗಿದೆ. ನನ್ನ ವಿರುದ್ಧ ದಆಳಿ ನಡೆಸುತ್ತಿದೆ. ಆದರೆ ನಾನು ಸರ್ದಾರ್ ವಲ್ಲಭಭಾಯ್ ನಾಡಲ್ಲಿ ಹುಟ್ಟಿದವನು, ಬಡವರಿಗೆ ಅವರ ಹಕ್ಕು ಸಿಗುತ್ತದೆ, ದೇಶವನ್ನು ಲೂಟಿ ಮಾಡಲು ಯಾರಿಗೂ ಬಿಡುವುದಿಲ್ಲ’ ಎಂದಿದ್ದಾರೆ.
26/11 ದಾಳಿ ಮತ್ತು ಉರಿ ದಾಳಿಗೆ ನೀಡಿದ ಪ್ರತ್ಯುತ್ತರ ಹೇಗಿದೆ ಎಂಬುದನ್ನು ನೋಡಿ, ಎರಡಲ್ಲಿ ಎಷ್ಟೊಂದು ಭಿನ್ನತೆ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.