ಉಡುಪಿ: ಅಸ್ಪೃಶ್ಯತೆ ಆಚರಣೆ ಮಾಡಿದರೆ ಅದು ವೇದಕ್ಕೆ ಮಾಡುವ ಅಪಮಾನ, ಸನಾತನ ಧರ್ಮಕ್ಕೆ ಅಪಮಾನ ಮಾಡಿದಂತೆ. ಮುಸ್ಲಿಂ ದೊರೆಗಳ ದಾಳಿಯಲ್ಲಿ ಸೋತವರು ದಲಿತರಾದರು. ದಲಿತರು ಸ್ವಾಭಿಮಾನಿಗಳಂತೆ ಹಿಂದೂ ಧರ್ಮದಲ್ಲಿ ಉಳಿದರು. ಎಲ್ಲರಲ್ಲೂ ಭಗವಂತ ಇರುವಾಗ ದಲಿತರಲ್ಲಿ ಯಾಕೆ ಇಲ್ಲ. ಧರ್ಮ ಸಂಸದ್ ನಂತರ ಅಸ್ಪೃಶ್ಯತೆ ಇಲ್ಲವಾಗಲಿ ಎಂದು ಧರ್ಮ ಸಂಸದ್ನಲ್ಲಿ ವಿಶ್ವಹಿಂದೂ ಪರಿಷದ್ನ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದರು.
ಮಂದಿರಕ್ಕೆ ಎಲ್ಲರ ಪ್ರವೇಶವಾಗಬೇಕು, ಪಂಕ್ತಿ ಬೇಧವಿಲ್ಲದೆ ಭೋಜನ ವ್ಯವಸ್ಥೆಯಾಗಬೇಕು. ಬಾವಿಯ ನೀರು- ಸ್ಮಶಾನದಲ್ಲಿ ಜಾತಿ ಪದ್ಧತಿ ಬೇಡ ಎಂದರು.
ಈ ವೇಳೆ ಮಾತನಾಡಿದ ಸ್ವರ್ಣವಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮೀಜಿಗಳು, ‘ಹಿಂದೂಗಳ ದೇವಸ್ಥಾನ ಹಿಂದೂಗಳ ಕೈಯಲ್ಲೇ ಇರಲಿ. ಸ್ವಾಯತ್ತ ಮಂಡಳಿ ರಚನೆ ಮಾಡಬೇಕು. ದೇವಸ್ಥಾನದ ಆಡಳಿತ ಭಕ್ತರ ಕೈಗೆ ಬರಬೇಕು. ಈ ಬಗ್ಗೆ ಸಂತರ ನೇತೃತ್ವದಲ್ಲಿ ಹೋರಾಟ ನಡೆಯಬೇಕು. ಮಸೀದಿ – ಚರ್ಚ್ನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ಹಿಂದೂಗಳ ಮಂದಿರ ಸರ್ಕಾರಕ್ಕೆ ಯಾಕೆ? ದೇಶದ ಸಂತರು ಈ ಬಗ್ಗೆ ಒಗ್ಗೂಡಬೇಕು. ಸರ್ಕಾರದ ಎದುರು ಅಭಿಪ್ರಾಯ ಮಂಡಿಸಬೇಕು’ ಎಂದರು.
ಅಯೋಧ್ಯೆ ದಿಗಂಬರ ಮಠದ ಹಿರಿಯ ಸನ್ಯಾಸಿ ಸಂತ ಸುರೇಶ್ ದಾಸ್ ಜೀ ಮಾತನಾಡಿ, ’ಮಾತುಕತೆಯಿಂದ ಮಂದಿರ ನಿರ್ಮಾಣವಾಗಲ್ಲ, ಯೋಗಿ ಆದಿತ್ಯನಾಥರ ಮೇಲೆ ಭರವಸೆಯಿದೆ. ಉತ್ತರ ಮತ್ತು ದಕ್ಷಿಣದ ಜನ ಒಂದಾಗಬೇಕು ಅದೇ ಇಟ್ಟಿಗೆ – ಕಲ್ಲಿನಿಂದ ರಾಮನ ದೇಗುಲ ಕಟ್ಟಬೇಕು. ತಾಳ್ಮೆಯ ಕಟ್ಟೆ ಒಡೆಯಲು ಬಿಡಬೇಡಿ, ಗೀತೆ – ರಾಮಾಯಣ ಇರುವುದು ಭಾರತದಲ್ಲಿ. ಮಸೀದಿ ಪಾಕಿಸ್ಥಾನದಲ್ಲಿ ನಿರ್ಮಾಣವಾಗಲಿ, ಬಾಬರ್ಗೆ ಭಾರತದಲ್ಲಿ ಮಸೀದಿ ಯಾಕೆ? ಎಂದರು.
ಸಂಸದ್ನಲ್ಲಿ ಕೈಗೊಂಡ ನಿರ್ಣಯಗಳು ಈ ಕೆಳಗಿನಂತಿವೆ
ಭಾರತದ ನೆಲದಲ್ಲಿ ಹುಟ್ಟಿದ ಧಾರ್ಮಿಕ ಮುಖಂಡರಿಂದ ಪ್ರವರ್ತಿತವಾದ ಎಲ್ಲ ಧರ್ಮಗಳೂ ಹಿಂದೂ ಧರ್ಮದ ಭಾಗ. ವಿದೇಶಗಳಿಂದ ಬಂದವು ಮಾತ್ರ ಹಿಂದೂಯೇತರ ಧರ್ಮಗಳು.
ಪರಿಶಿಷ್ಟ ಜಾತಿಯ ಜನರನ್ನು ಮೇಲು ವರ್ಗದ ಜನರು ದತ್ತು ಪಡೆದು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ಧಾರ್ಮಿಕ ವಿಧಿ ವಿಧಾನಗಳಲ್ಲಿ ಎಲ್ಲ ಜಾತಿಯ ಜನರಿಗೂ ಅವಕಾಶ ನೀಡಬೇಕು.
ಸಂತರು, ಮಠಾಧೀಶರು, ಧಾರ್ಮಿಕ ನಾಯಕರು ಪರಿಶಿಷ್ಟ ಜಾತಿ ಜನರು ವಾಸಿಸುವ ಪ್ರದೇಶದಲ್ಲಿ ಸಂಚಾರ ಮಾಡಬೇಕು.
ಪ್ರಲೋಭನೆ, ಆಮಿಷಗಳಿಗೆ ಒಳಗಾಗಿ ಮತಾಂತರ ಹೊಂದಿರುವ ಹಿಂದೂಗಳನ್ನು ಮರಳಿ ಕರೆತರಲು ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.