ರಾಯಭಾಗ್: ಬೆಳಗಾವಿಯ ರಾಯಭಾಗ್ನಲ್ಲಿ ಬುಧವಾರ ಬಿಜೆಪಿಯ ಪರಿವರ್ತನಾ ಸಮಾವೇಶ ಜರಗಿತು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ’ರಾಯಭಾಗದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಹಿ೦ದೆ ನಮ್ಮ ಸರ್ಕಾರವಿದ್ದಾಗ, 13ಕೋಟಿ ವೆಚ್ಚದಲ್ಲಿ ರಾಣಿ ಚೆನ್ನಮ್ಮ ವಸತಿ ನಿಲಯದ ನಿರ್ಮಾಣ ಮಾಡಲಾಗಿದೆ ಮತ್ತು 2 ಕೋಟಿ ವೆಚ್ಚದಲ್ಲಿ ಡಾ. ಬಾಬು ಜಗಜೀವನ್ ರಾಮ್ ಭವನ ನಿರ್ಮಿಸಲಾಗಿತ್ತು’ ಎಂದರು.
ನೆರೆ ಹಾವಳಿ ಸಂದರ್ಭದಲ್ಲಿ ಇಲ್ಲಿನ 500ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ನಿರ್ಮಿಸಿ ಕೊಡುವ ಕಾರ್ಯವನ್ನು, ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಬಿಜೆಪಿ ಸರ್ಕಾರವಿದ್ದಾಗ ಮಾಡಲಾಗಿತ್ತು ಎಂದರು.
ರಾಯಭಾಗ ದಲ್ಲಿ ಸುಮಾರು 2.5 ಕೋಟಿ ವೆಚ್ಚದಲ್ಲಿ ಕ್ಷೇತ್ರದಾದ್ಯ೦ತ ಕೆರೆಗಳ ಪುನರುಜ್ಜೀವನ ಗೊಳಿಸಲಾಗಿತ್ತು. ನಗರ ಮುನೋಳಿ, ಕಬ್ಬೂರು, ಬೆ೦ಡವಾಡ ಗ್ರಾಮಗಳಲ್ಲಿ ನೀರು ಪೂರೈಕೆಗೆ 45 ಕೋಟಿ ವೆಚ್ಚದ ಯೋಜನೆ; ೬ಕೋಟಿ ವೆಚ್ಚದ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿತ್ತು. ಇಲ್ಲಿನ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಅನೇಕ ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ ಎಂದರು.
ಹಿ೦ದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ, ಭೂ ಚೇತನ, ಪ್ರತ್ಯೇಕ ಕೃಷಿ ಬಜೆಟ್, ಕೃಷಿ ಮಿಶನ್, ಸಾವಯವ ಕೃಷಿ ಪ್ರೋತ್ಸಾಹಕ್ಕೆ ಹಲವಾರು ಕ್ರಮಗಳು, ಬಡಮಕ್ಕಳಿಗೆ ಸೈಕಲ್ ಮೊದಲಾದ ಅನೇಕ ಜನಪರ, ಯಶಸ್ವೀ ಯೋಜನೆಗಳನ್ನು ನೀಡಿದ್ದೆವು ಎಂದರು.
ನವ ಭಾರತದ ನಿರ್ಮಾಣದೊ೦ದಿಗೆ ನವ ಕರ್ನಾಟಕವೂ ಅಭಿವೃದ್ಧಿ ಹೊ೦ದಬೇಕು. ರಾಯಭಾಗವೂ ಹಿ೦ದುಳಿಯ ಕೂಡದು. ಅದಕ್ಕಾಗಿ ಬಿಜೆಪಿಗೆ ನಿಮ್ಮ ಆಶೀರ್ವಾದವನ್ನು ಪ್ರಾರ್ಥಿಸಲು ನಾವಿಲ್ಲಿಗೆ ಬ೦ದಿದ್ದೇವೆ ಎಂದರು.
.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.