ನವದೆಹಲಿ: ಸಿಕ್ಕಿಂ ಸೆಕ್ಟರ್ನ ಡೋಕ್ಲಾಂನಲ್ಲಿ ಉದ್ಭವವಾಗಿರುವ ಚೀನಾ-ಭಾರತ ನಡುವಣ ಗಡಿ ಸಮಸ್ಯೆ ತುಂಬಾ ಗಂಭೀರವಾದುದೇನಲ್ಲ ಎಂದಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಹಿಂದಿ ಚೀನಿ ಭಾಯಿ ಭಾಯಿ ಎಂಬ ಘೋಷಣೆ ಪಠಿಸಿದ್ದಾರೆ.
ನೆರೆಹೊರೆಯ ಉಭಯ ದೇಶಗಳು ಪರಸ್ಪರ ಹೊಂದಿಕೊಂಡು ಬದುಕಬೇಕು ಎಂದಿರುವ ಅವರು, ಇಂತಹ ಸಮಸ್ಯೆಯನ್ನು ಚೀನಾ-ಭಾರತ ಹಿಂದೆಯೂ ಎದುರಿಸಿವೆ. ಕಠಿಣ ಹೇಳಿಕೆಗಳನ್ನು ನೀಡಿವೆ. ಆದರೆ ಮುಂದಿರುವ ಮಾರ್ಗ ಒಂದೇ ಅದು ‘ಹಿಂದಿ ಚೀನಿ ಭಾಯಿ ಭಾಯಿ’ ಎಂದಿದ್ದಾರೆ.
‘1962ರಲ್ಲೂ ಚೀನಾ ಸೇನೆ ಬಾಂಮ್ಡಿಲವನ್ನು ತಲುಪಿತ್ತು, ಬಳಿಕ ಹಿಂದೆ ಹೋಗಿತ್ತು. ಭಾರತ-ಚೀನಾ ಪರಸ್ಪರ ಹೊಂದಿಕೆಯಿಂದ ಬದುಕಬೇಕು’ ಎಂದಿದ್ದಾರೆ.
ಭಾರತ ಆಧ್ಯಾತ್ಮ ಗುರು ಎಂದು ಕರೆಯುವ ದಲೈಲಾಮಾರನ್ನು ಚೀನಾ ‘ಅಪಾಯಕಾರಿ ಪ್ರತ್ಯೇಕತಾವಾದಿ’ ಎಂದು ಕರೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.