ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಗೊಂಡಿರುವ ರಾಮನಾಥ್ ಕೋವಿಂದ್ ಅವರು ಭಾವುಕರಾಗಿ ಈ ದೇಶದ ಬಡ, ಶ್ರಮಿಕ ವರ್ಗಕ್ಕೆ ಅತ್ಯದ್ಭುತವಾದ ಸಂದೇಶವನ್ನು ರವಾನಿಸಿದ್ದಾರೆ.
ಮಳೆಗೆ ದಾರಿ ಕಾಣದೆ ಮಂಕಾಗಿರುವ, ಒಪ್ಪೊತ್ತಿನ ಊಟಕ್ಕಾಗಿ ಅವಿರತವಾಗಿ ಹೋರಾಡುವ, ಬೆವರು ಸುರಿಸುವ ಹಲವಾರು ರಾಮನಾಥ್ ಕೋವಿಂದ್ಗಳು ನಮ್ಮ ದೇಶದಲ್ಲಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ನಾನು ರಾಷ್ಟ್ರಪತಿ ಭವನಕ್ಕೆ ತೆರಳುತ್ತೇನೆ ಎಂದಿದ್ದಾರೆ.
ರಾಷ್ಟ್ರಪತಿಯಾಗಿ ನನ್ನನ್ನು ಆಯ್ಕೆ ಮಾಡಿರುವುದು ಭಾರತೀಯ ಪ್ರಜಾಪ್ರಭುತ್ವದ ಶ್ರೇಷ್ಠತೆಯ ಅತೀದೊಡ್ಡ ಸಂಕೇತ ಎಂದು ವಿಶ್ಲೇಷಿಸಿರುವ ಅವರು, ಸಂವಿಧಾನವನ್ನು ರಕ್ಷಿಸುವುದು, ಅದರ ಘನತೆಯನ್ನು ಎತ್ತಿ ಹಿಡಿಯುವುದು ನನ್ನ ಕರ್ತವ್ಯ. ಅದನ್ನು ಪ್ರಮಾಣಿವಾಗಿ ಮಾಡುತ್ತೇನೆ ಎಂದಿದ್ದಾರೆ.
‘ಇದು ವೈಯಕ್ತಿಕವಾಗಿ ನನಗೆ ಅತ್ಯಂತ ಭಾವುಕ ಕ್ಷಣ, ಇಂದು ದೆಹಲಿಯಲ್ಲಿ ಮಳೆಯಾಗುತ್ತಿದೆ. ಈ ಮಳೆ ಮಣ್ಣಿನ ಗೋಡೆಗಳಿದ್ದ ನನ್ನ ಪೂರ್ವಜರ ಕಚ್ಛಾ ಮನೆಯನ್ನು ನೆನಪಿಸುತ್ತದೆ. ಮಳೆ ಹನಿಗಳು ಮನೆಯೊಳಗೆ ಬೀಳುತ್ತಿದ್ದ ವೇಳೆ ಅದರಿಂದ ತಪ್ಪಿಸಲು ನಾವೆಲ್ಲಾ ಸಹೋದರರು ಮಳೆ ಹೋಗುವ ತನಕ ಗೋಡೆಗೆ ಒರಗುತ್ತಿದ್ದೆವು. ಇಂತಹ ಹಲವಾರು ರಾಮನಾಥ್ ಕೋವಿಂದ್ಗಳು ನಮ್ಮ ದೇಶದಲ್ಲಿದ್ದಾರೆ. ಅವರೆಲ್ಲರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನಕ್ಕೆ ತೆರಳುತ್ತೇನೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.