ನವದೆಹಲಿ : ಸಚಿವರುಗಳ ಕಾರ್ಯಕ್ಷಮತೆಯನ್ನು ಅಳೆಯುವ ಸಲುವಾಗಿ ಪ್ರಧಾನಿ ಸಚಿವಾಲಯವು ಎಲ್ಲಾ ಸಚಿವಾಲಯಗಳ ಕಡತಗಳ ಚಲನೆಯ ಬಗ್ಗೆ ವಿಸ್ತೃತ ವರದಿಯನ್ನು ಕೇಳಿದೆ.
ರಾಷ್ಟ್ರಪತಿ ಚುನಾವಣೆಯ ಬಳಿಕ ಕೇಂದ್ರ ಸಂಪುಟದಲ್ಲಿ ಮಹತ್ವದ ಪುನರ್ರಚನೆ ನಡೆಯಲಿದ್ದು, ಇದಕ್ಕಾಗಿ ಸಚಿವರುಗಳ ಕಾರ್ಯಕ್ಷಮತೆಯ ಪ್ರದರ್ಶನದ ಬಗ್ಗೆ ವರದಿ ಕೇಳಲಾಗಿದೆ ಎನ್ನಲಾಗಿದೆ.
ಸಚಿವರುಗಳಿಗೆ 2014 ರ ಜೂನ್ 1 ರಿಂದ 2017 ರ ಮೇ 31 ರ ವರೆಗೆ ಸಲ್ಲಿಕೆಯಾದ ಎಲ್ಲಾ ಕಡತಗಳ ಸ್ಥಿತಿಗತಿಗಳ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.
ಕಡತಗಳು ಯಾವಾಗ ಸಲ್ಲಿಕೆಯಾಯಿತು ಮತ್ತು ಅವುಗಳನ್ನು ಯಾವಾಗ ಪೂರ್ಣಗೊಳಿಸಲಾಯಿತು, ಈ ಪ್ರಕ್ರಿಯೆಗೆ ಸಚಿವರುಗಳು ಎಷ್ಟು ಅವಧಿಯನ್ನು ತೆಗೆದುಕೊಂಡರು ಎಂಬ ಎಲ್ಲಾ ವಿಸ್ತೃತ ವರದಿಯನ್ನು ನೀಡುವಂತೆ ಪ್ರಧಾನಿ ಸಚಿವಾಲಯ ಆದೇಶಿಸಿದೆ.
ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಯಾಯ ಸಚಿವರುಗಳಿಗೆ ಈ ಬಗ್ಗೆ ವರದಿ ನೀಡುವಂತೆ ನಿರ್ದೇಶನ ನೀಡಿದ್ದರು. ಇದಕ್ಕಾಗಿ ಒಂದು ಅರ್ಜಿಯನ್ನು ಸಚಿವರುಗಳಿಗೆ ಕಳುಹಿಸಿ ಕೊಡಲಾಗಿದೆ.
ಈ ಅರ್ಜಿಗಳಲ್ಲಿ 5 ಕಾಲಂಗಳಿದ್ದು, ಇವುಗಳಲ್ಲಿ ಸಬ್ಹೆಡ್ಡಿಂಗ್, ಓಪನಿಂಗ್ ಬ್ಯಾಲೆನ್ಸ್, ಕಡತ ಸಲ್ಲಿಕೆಯಾದ ಅವಧಿ, ಒಟ್ಟು ಕಡತ, ವಿಲೇವಾರಿ ಮತ್ತು ಬಾಕಿ ಉಳಿದಿರುವ ವಿವರಗಳನ್ನು ಇಲ್ಲಿ ಸಲ್ಲಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.