ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಸಲುವಾಗಿ ಕಲ್ಲು ತೂರಾಟಗಾರನನ್ನೇ ಜೀಪಿಗೆ ಕಟ್ಟಿದ ಮೇಜರ್ ಲೀತುಲ್ ಗೋಗೈ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ’ಕಮೆಂಡೆಷನ್ ಕಾರ್ಡ್’ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸುವ ಸಲುವಾಗಿ ಕಾಶ್ಮೀರದಲ್ಲಿನ ಉದ್ರಿಕ್ತ ಜಿಹಾದಿಗಳು ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರು. ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಲ್ಲು ತೂರಾಟ ನಡೆಸುತ್ತಿದ್ದ ಅದೇ ಗುಂಪಿನಲ್ಲಿರುವ ವ್ಯಕ್ತಿಯೊಬ್ಬನನ್ನು ಮೇಜರ್ ಗೋಗೈ ಅವರು ತಮ್ಮ ಜೀಪಿನ ಮುಂಭಾಗಕ್ಕೆ ಕಟ್ಟಿದ್ದರು. ಈ ಮೂಲಕ ನಡೆಯಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದರು, ತಮ್ಮ ಸಹೋದ್ಯೊಗಿಗಳ ಪ್ರಾಣ ರಕ್ಷಿಸಿದ್ದರು.
ಆದರೆ ಸಾಮಾಜಿಕ ತಾಣಗಳಲ್ಲಿ ಸೇನೆಯ ಈ ಕ್ರಮಕ್ಕೆ ಕೆಲವರಿಂದ ಭಾರಿ ವೀರೋಧಗಳು ವ್ಯಕ್ತವಾಗಿದ್ದವು. ಇದರಿಂದಾಗಿ ಸೇನೆ ಕೋರ್ಟ್ ಆಫ್ ಎನ್ಕ್ವಾಯಿರಿ ನಡೆಸಿದ್ದವು, ಕೋರ್ಟ್ ಮೇಜರ್ ಗೋಗೈ ಪರ ತೀರ್ಪು ನೀಡಿತ್ತು. ಇದೀಗ ಮೇಜರ್ ಗೋಗೈ ಅವರಿಗೆ ‘ಚೀಫ್ ಆಫ್ ಆರ್ಮಿ ಸ್ಟಾಫ್ ಕಮೆಂಡೆಷನ್ ಕಾರ್ಡ್’ನ್ನು ನೀಡಿ ಗೌರವಿಸಲಾಗಿದೆ. ಸೇವೆ ಮತ್ತು ಶ್ರದ್ಧೆಯನ್ನು ಪರಿಗಣಿಸಿ ಕೊಡಲಾಗುವ ಪ್ರತಿಷ್ಠಿತ ಗೌರವ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.