ಕೋಲ್ಕತ್ತಾ: ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಬಂಧಿತ ಉಗ್ರ ಮುಜಾಫರ್ ಅಹ್ಮದ್ ರತರ್ ಇದೀಗ ತನಗೆ ಉತ್ತಮ ಆಹಾರ ಮತ್ತು ಟಿವಿ ವ್ಯವಸ್ಥೆ ಬೇಕೆಂದು ಆಗ್ರಹಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾನೆ.
30 ವರ್ಷದ ರತರ್ ಕೋಲ್ಕತ್ತಾದ ಡುಂಡುಂ ಸೆಂಟ್ರಲ್ ಜೈಲಿನಲ್ಲಿ ಏಕಾಂಗಿ ಕೈದಿ ಸೆಲ್ನಲ್ಲಿ ಇದ್ದ. ಈತನಿಗೆ ಮರಣದಂಡನೆಯ ಶಿಕ್ಷೆಯನ್ನು ಈತನಿಗೆ ಘೋಷಿಸಲಾಗಿದೆ.
ಈತನ ಉಪವಾಸ ಸತ್ಯಾಗ್ರಹ ಆರಂಭಿಸಿದ ಹಿನ್ನಲೆಯಲ್ಲಿ ಇದೀಗ ಈತನನ್ನು ಪ್ರೆಸಿಡೆನ್ಸಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
‘ಕಳೆದ ಕೆಲ ದಿನಗಳಿಂದ ಆತ ಟಿವಿ ಹಾಗೂ ಉತ್ತಮ ಆಹಾರಕ್ಕೆ ಬೇಡಿಕೆಯಿಟ್ಟು ಉಪವಾಸ ನಡೆಸಿದ್ದಾನೆ. ನಿಯಮಗಳ ಪ್ರಕಾರ ಮರಣದಂಡನೆ ಘೋಷಣೆಯಾದ ಕೈದಿಗಳಿಗೆ ಟಿವಿ ಸೆಟ್ ನೀಡುವಂತಿಲ್ಲ. ಎಲ್ಲಾ ಕೈದಿಗಳಿಗೂ ನೀಡುವಂತಹ ಉತ್ತಮ ಆಹಾರವನ್ನೇ ಆತನಿಗೆ ನೀಡುತ್ತಿದ್ದೇವೆ. ಈ ಬಗ್ಗೆ ಆತನಿಗೆ ತಿಳಿಹೇಳಲು ಪ್ರಯತ್ನಿಸಿದೆವು. ಆದರೆ ಆತ ಕೇಳಲಿಲ್ಲ’ ಎಂದು ರಾಜ್ಯ ಬಂಧಿಖಾನೆ ಸಚಿವ ಅಬನಿ ಮೋಹನ್ ಜೋರ್ದಾರ್ ತಿಳಿಸಿದ್ದಾರೆ.
ಬಳಿಕ ಆತನ ಉಪವಾಸ ಸತ್ಯಾಗ್ರಹ ಆರಂಭಿಸಿದ, ಈ ಹಿನ್ನಲೆಯಲ್ಲಿ ಆತನನ್ನು ಶಿಫ್ಟ್ ಮಾಡಲಾಯಿತು. ಶಿಫ್ಟ್ ಆದ ಬಳಿಕ ಉಪವಾಸ ಕೈಬಿಟ್ಟಿದ್ದಾನೆ ಎಂದಿದ್ದಾನೆ.
ಬಂಧಿತ ನಕ್ಸಲರು ಮತ್ತು ಉಗ್ರರು ತಮ್ಮ ಬೇಡಿಕೆಯನ್ನು ಪೂರೈಸಲು ಉಪವಾಸ ಎಂಬ ಟ್ರಿಕ್ಸ್ ಆರಂಭಿಸುತ್ತಾರೆ, ಇದು ಸಾಮಾನ್ಯ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ರತರ್ ಜಮ್ಮು ಕಾಶ್ಮೀರ ಅನಂತ್ನಾಗ್ ನಿವಾಸಿಯಾಗಿದ್ದು, 2007ರಂದು ಭಾರತ-ಬಾಂಗ್ಲಾ ಗಡಿಯಲ್ಲಿ ಇಬ್ಬರು ಪಾಕ್ ಉಗ್ರರೊಂದಿಗೆ ಈತನ ಬಂಧನವಾಗಿತ್ತು. ಈ ಮೂವರಿಗೂ ಬನ್ಗೋನ್ ಜಿಲ್ಲಾ ನ್ಯಾಯಾಲಯ ಮರಣದಂಡನೆಯನ್ನು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.