ಚೆನ್ನೈ: ಎಐಎಡಿಎಂಕೆ ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ವಿಕೆ ಶಶಿಕಲಾ ಅವರ ನೇಮಕಕ್ಕೆ ಸಂಬಂಧಿಸಿದಂತೆ ಆ ಪಕ್ಷ ನೀಡಿರುವ ಪ್ರತಿಕ್ರಿಯೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಶಶಿಕಲಾ ಅವರ ನೇಮಕದ ಬಗ್ಗೆ ಆಯೋಗ ಎತ್ತಿರುವ ಪ್ರಶ್ನೆಗೆ ಉತ್ತರವಾಗಿ ಎಐಎಡಿಎಂಕೆ ಪಕ್ಷ ಕಳುಹಿಸಿರುವ ಪತ್ರದಲ್ಲಿ ಟಿಟಿವಿ ದಿನಕರನ್ ಅವರ ಸಹಿ ಇದೆ. ಆದರೆ ದಿನಕರನ್ ಅವರ ಹೆಸರು ಚುನಾವಣಾ ಆಯೋಗದ ಬಳಿಯಿರುವ ಎಐಎಡಿಎಂಕೆ ಪಕ್ಷದ ಕಾರ್ಯಕಾರಿಣಿಗಳ ಪಟ್ಟಿಯಲ್ಲಿ ಇಲ್ಲ ಎಂದು ಆಯೋಗ ತಿಳಿಸಿದೆ.
ಅಲ್ಲದೇ ಮತ್ತೊಂದು ಬಾರಿ ಮಾರ್ಚ್ 10ರೊಳಗೆ ಸ್ವತಃ ಶಶಿಕಲಾ ಅವರೇ ತಮ್ಮ ಸಹಿ ಹಾಕಿ ಅಥವಾ ಅಧಿಕೃತ ಕಾರ್ಯಕಾರಿಣಿಗಳ ಸಹಿಯುಳ್ಳ ಪತ್ರವನ್ನು ಚುನಾವಣಾ ಆಯೋಗಗಕ್ಕೆ ಕಳುಹಿಸಿಕೊಡಬೇಕು ಎಂದು ತಾಕೀತು ಮಾಡಿದೆ.
ಜಯಲಲಿತಾ ಅವರ ಮರಣದ ಬಳಿಕ ಶಶಿಕಲಾ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಚುನಾವಣಾ ಆಯೋಗ ಶಶಿಕಲಾಗೆ ನೋಟಿಸ್ ಜಾರಿಗೊಳಿಸಿತ್ತು, ಪರಪ್ಪನ ಅಗ್ರಹಾರಕ್ಕೆಯೇ ನೋಟಿಸ್ ರವಾನೆಯಾಗಿದ್ದು ಫೆ.28ರೊಳಗೆ ಉತ್ತರ ನೀಡುವಂತೆ ಸೂಚಿಸಿತ್ತು.
ಇದೀಗ ಶಶಿಕಲಾ ಅವರ ಪ್ರತಿಕ್ರಿಯೆಯನ್ನು ಆಯೋಗ ತಿರಸ್ಕರಿಸಿದ್ದು, ಮತ್ತೊಂದು ಬಾರಿಗೆ ಅವರು ಪತ್ರವನ್ನು ಆಯೋಗಕ್ಕೆ ಕಳುಹಿಸಿಕೊಡಬೇಕಾಗಿದೆ.
ಶಶಿಕಲಾ ನೇಮಕವನ್ನು ಪ್ರಶ್ನಿಸಿ ಪಕ್ಷದ ಕೆಲ ಹಿರಿಯ ನಾಯಕರು ಆಯೋಗಕ್ಕೆ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ ಆಯೋಗ ನೋಟಿಸ್ ಜಾರಿಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.