ನವದೆಹಲಿ: ಉತ್ತರ ಭಾರತದಲ್ಲಿ ಗುರುವಾರ ದಟ್ಟ ಮಂಜಿನ ಪರಿಸ್ಥಿತಿಯಿಂದಾಗಿ ರೈಲ್ವೆ ಹಾಗೂ ವಾಯು/ವಿಮಾನ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
ಭಾರಿ ಮಂಜಿನ ಕಾರಣದಿಂದಾಗಿ ಈಗಾಗಲೇ 94 ರೈಲ್ವೆಗಳು ಹಲವು ಗಂಟೆ ತಡವಾಗಿ ಸಂಚರಿಸಲಿದ್ದು, ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಹಾಗೂ 16 ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇಂದಿರಾ ಗಾಂಧೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ವಿಮಾನ ಹಾರಾಟದ ಸಮಯದಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಬೆಳಗ್ಗೆ 5.30 ಕ್ಕೆ 400 ಮೀ ಗೋಚರತೆ ಇತ್ತು, ಆದರೆ ನಂತರ 8.30 ಕ್ಕೆ 100 ಮೀಟರ್ಗೆ ಕ್ಷೀಣಿಸಿತು. ಇದೇ ಪರಿಸ್ಥಿತಿ ಕನಿಷ್ಠ ಎರಡು ದಿನಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಿನದ ಸಮಯದಲ್ಲಿ ಆಕಾಶ ಸ್ಪಷ್ಟವಾಗಿರಲಿದ್ದು, ಬೆಳಗ್ಗೆ ದಟ್ಟವಾದ ಮಂಜಿನಿಂದ ಕೂಡಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗರಿಷ್ಠ ತಾಪಮಾನ ಸುಮಾರು 23 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಳಗ್ಗೆ 8.30 ಕ್ಕೆ ಶೇ. 97% ಆರ್ದ್ರತೆ ಇರಲಿದೆ ಎಂದು ಇಲಾಖೆ ವರದಿಮಾಡಿದೆ.
ದೆಹಲಿಯ ಎನ್ಸಿಆರ್ ಪ್ರದೇಶ ಸೇರಿದಂತೆ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯದ ಕೆಲವೊಂದು ಪ್ರದೇಶಗಳು ದಟ್ಟ ಮಂಜಿನಿಂದ ಆವರಿಸಿವೆ.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್, ಮಂಜಿನ ಸಮಸ್ಯೆಯನ್ನು ಪರಿಹರಿಸಲು ತಾನು ಸನ್ನದ್ಧವಾಗಿದೆ ಎಂದು ಮಂಗಳವಾರ ಹೇಳಿದೆ.
ಚಳಿಗಾಲದ ಸಮಯದಲ್ಲಿ ಬೆಳಕಿನ ಪ್ರಮಾಣ ಕಡಿಮೆ ಇದ್ದರೂ ವಿಮಾನ ಹಾರಾಟಗಳು ಮುಂದುವರೆಯಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಐಜಿಐ ವಿಮಾನ ನಿಲ್ದಾಣದ 28, 29 ಮತ್ತು 11 ಈ ಮೂರು ರನ್ವೇಗಳು CAT III B ಕಾರ್ಯಾಚರಣೆಗೆ ಸಮರ್ಥವಾಗಿವೆ ಎಂದು ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.