ನವದೆಹಲಿ: ಭಾರೀ ಪ್ರಮಾಣದ ನಗದು/ಹಣ ಭ್ರಷ್ಟಾಚಾರ ಮತ್ತು ಕಪ್ಪುಹಣದ ಪ್ರಮುಖ ಮೂಲಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯದಲ್ಲಿ ಪ್ರಕಟಿಸಲಾದ ಲೇಖನವೊಂದರ ಪ್ರಕಾರ, ‘ಭ್ರಷ್ಟಾಚಾರ ದೇಶದ ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸುತ್ತದೆ.ಅದು ಬಡಜನರು, ಮಧ್ಯಮ ವರ್ಗದ ಜನರ ಕನಸುಗಳಿಗೆ ಕಡಿವಾಣ ಹಾಕುತ್ತದೆ’ ಎಂದು ಮೋದಿಯವರು ಹೇಳಿದ್ದಾರೆ.
21ನೇ ಶತಮಾನದಲ್ಲಿ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ನಗದುರಹಿತ ವ್ಯವಹಾರ ಬದಲಾಗುವಂತೆ ಜನರಲ್ಲಿ ಕೋರಿದ ಮೋದಿ ಅವರು, ಭ್ರಷ್ಟಾಚಾರ, ಕಪ್ಪು ಹಣಗಳಂತಹ ಸಾಮಾಜಿಕ ಪಿಡುಗು ಮುಕ್ತ ಸಧೃಢ ಭಾರತದ ನಿರ್ಮಾಣಕ್ಕಾಗಿ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ನಾವು ಇವತ್ತು ಮೊಬೈಲ್ ಯುಗದಲ್ಲಿ ಜೀವಿಸುತ್ತಿದ್ದೇವೆ. ಮೊಬೈಲ್ ಬ್ಯಾಂಕಿಗ್, ಮೊಬೈಲ್ ವಾಲೆಟ್ ಸಹಾಯದಿಂದ ಆಹಾರ ಸೇವೆ, ವಸ್ತುಗಳ ಖರೀದಿ ಮತ್ತು ವ್ಯಾಪಾರ, ಟ್ಯಾಕ್ಸಿ ಸೇವೆ ಹಾಗೂ ಇನ್ನೂ ಬಹಳಷ್ಟು ಸೌಲಭ್ಯಗಳನ್ನು ನಾವು ಮೊಬೈಲ್ ಮೂಲಕ ಪಡೆಯಬಹುದಾಗಿದೆ. ತಂತ್ರಜ್ಞಾನವು ನಮ್ಮ ಜೀವನ ಪದ್ಧತಿಯಲ್ಲಿ ವೇಗ ಮತ್ತು ಅನೂಕಲವನ್ನು ತಂದಿದೆ ಎಂದು ಮೋದಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.