ಚೆನ್ನೈ: ಖ್ಯಾತ ಶಾಸ್ತ್ರೀಯ ಸಂಗೀತ ದಿಗ್ಗಜ ಎಂ. ಬಾಲಮುರಳಿಕೃಷ್ಣ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ಪ್ರಾಯವಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಾಲಮುರಳಿಕೃಷ್ಣ ಅವರು ಆಂಧ್ರಪ್ರದೇಶದ ಶಂಕರಗುಪ್ತಮ್ನಲ್ಲಿ ಜುಲೈ 6 ರ 1930 ರಂದು ಜನಿಸಿದ್ದರು. ಪೋಷಕರು ಇವರಿಗೆ ಮುರಳಿ ಎಂದು ನಾಮಕರಣ ಮಾಡಿದರು. ತಾಯಿ ಸೂರ್ಯಕಾಂತಮ್ಮ ಅವರು ವೀಣಾವಾದಕಿಯಾಗಿದ್ದರು. ಬಾಲಮುರಳಿ ಕೃಷ್ಣ ಅವರು ಆರನೇ ವರ್ಷದಲ್ಲೇ ಸಂಗೀತ ಲೋಕಕ್ಕೆ ಕಾಲಿಟ್ಟಿದ್ದರು. ಇವರಿಗೆ ಬಾಲಮುರಳಿ ಕೃಷ್ಣ ಎಂದು ಅವರ ಊರಿನಲ್ಲಿದ್ದ ಹರಿಕಥಾ ವಿದ್ವಾನ್ ಸತ್ಯನಾರಾಯಣ ಅವರು ಹೆಸರನ್ನಿಟ್ಟರು.
ಬಾಲ್ಯದಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಮತ್ತು ಮನೆಯಲ್ಲಿನ ವಾತಾವರಣ ಅವರನ್ನು ಸಂಗೀತೆಡೆಗೆ ಮತ್ತಷ್ಟು ಆಕರ್ಷಿಸಿತು. ಅವರ ತಂದೆ ಪಟ್ಟಾಭಿರಾಮಯ್ಯನವರೇ ಮೊದಲ ಗುರುಗಳು.
ಬಾಲಮುರಳಿ ಕೃಷ್ಣ ಅವರು ಸಂಗೀತ ಗಾಯನ, ವಯೋಲಿನ್ ಮತ್ತು ಪಿಟೀಲು ವಾದನದಲ್ಲಿ ಪರಿಣತಿ ಹೊಂದಿದ್ದರು. ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಸುಮಾರು 18,000 ಸಂಗೀತ ಕಛೇರಿಗಳನ್ನು ನೀಡಿದ್ದಾರೆ.
ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.